ADVERTISEMENT

ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ: ಶಾಸಕ ವೈದ್ಯ

​ಪ್ರಜಾವಾಣಿ ವಾರ್ತೆ
Published 10 ಮಾರ್ಚ್ 2025, 14:44 IST
Last Updated 10 ಮಾರ್ಚ್ 2025, 14:44 IST
10-ಸವದತ್ತಿ-01: ಕಾಯಕಯೋಗಿ ಶಿವಶರಣ ಜಯಂತೋತ್ಸವವನ್ನು ಶಾಸಕ ವಿಶ್ವಾಸ್ ವೈದ್ಯ ಉದ್ಘಾಟಿಸಿದರು.
10-ಸವದತ್ತಿ-01: ಕಾಯಕಯೋಗಿ ಶಿವಶರಣ ಜಯಂತೋತ್ಸವವನ್ನು ಶಾಸಕ ವಿಶ್ವಾಸ್ ವೈದ್ಯ ಉದ್ಘಾಟಿಸಿದರು.   

ಸವದತ್ತಿ: ಮೌಢ್ಯತೆ, ಜಾತಿ ಪದ್ಧತಿ, ಅಸಮಾನತೆ ವಿರುದ್ಧ ತಮ್ಮ ವಚನಗಳ ಮೂಲಕ ಸಾಮಾನ್ಯರನ್ನೂ ಜಾಗೃತರನ್ನಾಗಿಸಿ ಸಮಸಮಾಜ ಕಟ್ಟುವಲ್ಲಿ ಕಾಯಕ ನಿಷ್ಠೆ ಮೆರೆದ ಕಾಯಕ ಶರಣರ ಕೊಡುಗೆ ಅಪಾರ ಎಂದು ಶಾಸಕ ವಿಶ್ವಾಸ್ ವೈದ್ಯ ಹೇಳಿದರು.

ಇಲ್ಲಿನ ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ಭಾನುವಾರ ಜರುಗಿದ ಕಾಯಕಯೋಗಿ ಶಿವಶರಣ ಜಯಂತ್ಯುತ್ಸವ ಉದ್ಘಾಟಿಸಿ ಅವರು ಮಾತನಾಡಿದರು.

ಸರಳ ಜೀವನ, ಶುದ್ಧ ಧ್ಯಾನ, ನಿಷ್ಕಲ್ಮಶ ಭಕ್ತಿಗಳೇ ಶಕ್ತಿ ಎಂದು ಸಾರಿದ ಕಾಯಕ ಶರಣರ ವಚನಗಳು ಇಂದಿಗೂ ಪ್ರಸ್ತುತ. ಲೋಕದೊಳಗೆ ಶ್ರೇಷ್ಠತೆಯ ವ್ಯಸನ ಮತ್ತು ಮೇಲೆಂಬ ಅಹಂ ಹೊಂದಿದವರಿಗೆ ಕಾಯಕವೇ ಶ್ರೇಷ್ಠವೆಂದು ಸಾರಿ ಅದನ್ನು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಸಮಾಜದಲ್ಲಿ ಮಾದರಿ ಜೀವನ ನಡೆಸಿದ ಡೋಹರ ಕಕ್ಕಯ್ಯ, ಮಾದಾರ ಚನ್ನಯ್ಯ, ಮಾದಾರ ದೂಳಯ್ಯ, ಉರಿಲಿಂಗ ಪೆದ್ದ ಹಾಗೂ ಸಮಗಾರ ಹರಳಯ್ಯನವರ ಕಾಯಕ ಶರಣರ ಜಯಂತಿ ಅರ್ಥಪೂರ್ಣವಾಗಲಿ ಎಂದರು.

ADVERTISEMENT

ಈ ವೇಳೆ ಚಿಕ್ಕುಂಬಿಯ ಅಜಾತ ನಾಗಲಿಂಗಮಠದ ಅಭಿನವ ನಾಗಲಿಂಗ ಶ್ರೀ, ಯಲ್ಲಪ್ಪ ಗೊರವನಕೊಳ್ಳ, ಮಹಾದೇವ ಮಡ್ಲಿ, ವೈ.ವೈ. ಕಾಳಪ್ಪನವರ, ಎಚ್.ಎ. ಕದ್ರಾಪೂರಕರ, ಸುರೇಶ ಕಾಳಪ್ಪನವರ ಇದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.