ADVERTISEMENT

ಸೋಫಾ ತಂದು ಕೊಡಲಿಲ್ಲವೆಂದು ನವ ವಿವಾಹಿತೆ ಆತ್ಮಹತ್ಯೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2020, 16:04 IST
Last Updated 21 ಅಕ್ಟೋಬರ್ 2020, 16:04 IST

ಬೆಳಗಾವಿ: ತಾಲ್ಲೂಕಿನ ಸುಳಗಾ ಗ್ರಾಮದಲ್ಲಿ ನವ ವಿವಾಹಿತೆಯೊಬ್ಬರು ನೇಣು ಹಾಕಿಕೊಂಡು ಬುಧವಾರ ಆತ್ಮಹತ್ಯೆ ಮಾಡಿಕೊಂಡರು.

ಜ್ಯೋತಿ ಚೋಪಡೆ (19) ಮೃತರು. ‘ಅವರ ವಿವಾಹ ಉಚಗಾಂವ ಮೂಲದ ನಿಖಿಲ ಚೋಪಡೆ ಜೊತೆ ಮೂರು ತಿಂಗಳ ಹಿಂದೆಯಷ್ಟೆ ನಡೆದಿತ್ತು. ತಂದೆ ಹೊಸ ಸೋಫಾ ತಂದುಕೊಡಲಿಲ್ಲ ಎಂಬ ಬೇಸರದಿಂದ ಕೊಠಡಿಯ ಬಾಗಿಲಿನ ಚಿಲಕ ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ದೂರು ದಾಖಲಾಗಿದೆ’ ಎಂದು ಪೊಲೀಸರು ಮಾಹಿತಿ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT