ADVERTISEMENT

ಭಾಗ್ಯನಗರದಲ್ಲಿ ಮುಳ್ಳು ಹಂದಿ ಸೆರೆ

​ಪ್ರಜಾವಾಣಿ ವಾರ್ತೆ
Published 20 ಅಕ್ಟೋಬರ್ 2020, 11:26 IST
Last Updated 20 ಅಕ್ಟೋಬರ್ 2020, 11:26 IST

ಬೆಳಗಾವಿ: ಇಲ್ಲಿನ ಭಾಗ್ಯ ನಗರದ 6 ಮತ್ತು 7ನೇ ಕ್ರಾಸ್ ಪ್ರದೇಶದಲ್ಲಿ ಕಾಣಿಸಿಕೊಂಡು, ಸ್ಥಳೀಯರ ಆತಂಕಕ್ಕೆ ಕಾರಣವಾಗಿದ್ದ ಮುಳ್ಳುಹಂದಿಯನ್ನು ಅರಣ್ಯ ಇಲಾಖೆಯವರು ಮಂಗಳವಾರ ಸೆರೆಹಿಡಿದು, ಅದನ್ನು ಖಾನಾಪುರ ಕಾಡಿನಲ್ಲಿ ಬಿಟ್ಟರು.

ಮುಳ್ಳುಹಂದಿಯು ಈ ಭಾಗದಲ್ಲಿ ಇರುವ ಬಗ್ಗೆ ಸಾರ್ವಜನಿಕರು ಮಾಹಿತಿ ನೀಡಿದ್ದರು. ಇದನ್ನು ಆಧರಿಸಿ ಅರಣ್ಯ ಇಲಾಖೆ ಅಧಿಕಾರಿಗಳು ಬಲೆ ಇಟ್ಟಿದ್ದರು ಹಾಗೂ ಹಿಡಿಯುವಲ್ಲಿ ಯಶಸ್ವಿಯಾಗಿದ್ದರು.

ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಎಂ.ಬಿ. ಕುಸನಾಳ, ಆರ್‌ಎಫ್‌ಒ ಆರ್.ಎಚ್. ಡೊಂಬರಗಿ, ಶಿವಾನಂದ ಮಗದುಮ, ಡಿಆರ್‌ಎಫ್‌ಒ ವಿನಯ ಗೌಡರ, ಮಹಮ್ಮದ್ ಹಾಗೂ ಸಿಬ್ಬಂದಿ ಕಾರ್ಯಾಚರಣೆ ನಡೆಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.