ಬೆಳಗಾವಿ: ಇಲ್ಲಿನ ‘ಪ್ರಯತ್ನ’ ಸಂಘಟನೆಯಿಂದ ಶುಕ್ರವಾರ, ರಾಣಿ ಚನ್ನಮ್ಮ ನಗರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಗೆ ಶೈಕ್ಷಣಿಕ ಪರಿಕರಗಳನ್ನು ಒದಗಿಸಲಾಯಿತು. ಕರ್ಚಿ, ಟೇಬಲ್ ಸೇರಿದಂತೆ₹ 25 ಮೌಲ್ಯದ ವಸ್ತುಗಳನ್ನು ನೀಡಲಾಯಿತು.
ಸಂಘಟನೆ ಅಧ್ಯಕ್ಷೆ ಶಾಂತಾ ಆಚಾರ್ಯ ಮಾತನಾಡಿದರು. ಶಿಕ್ಷಕರ ಸಂಘದ ಜಿಲ್ಲಾ ಅಧ್ಯಕ್ಷ ಬಾಬು ಸೊಗಲಣ್ಣವರ, ಸರ್ಕಾರಿ ನೌಕರರ ಸಂಘದ ಉಪಾಧ್ಯಕ್ಷ ಹೈಬತ್ತಿ, ಸಮಾಜ ಸೇವಕಿ ಶೀಲಾ ದೇಶಪಾಂಡೆ, ಸಾರಂಗ ರಾಗೋಚೆ ಮಾತನಾಡಿದರು.ಗಾಯತ್ರಿ ರಜಪೂತ ಮಕ್ಕಳಿಗೆ ಸ್ವೆಟರ್ ನೀಡಿದರು.
ಮುಖ್ಯಶಿಕ್ಷಕ ಬಿ.ಎಫ್. ನದಾಫ್, ನಾಗರಿಕರಾದ ಚಿಕ್ಕೋರ್ಡೆ, ಗಂಗಾಧರ ಮುಳ್ಳೋಳಿ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಮಹಾದೇವ ಗೋಕಾಕ, ಉಪಾಧ್ಯಕ್ಷ ಮಲ್ಲಪ್ಪ ಮಿಜ್ಜಿ, ಪ್ರಯತ್ನ ಸದಸ್ಯರಾದ ಶ್ವೇತಾ ಭಟ್, ಸಂಗೀತಾ ಪಾಟೀಲ, ಬೀನಾ ರಾವ್, ಮಂಗಳಾ ಧಾರವಾಡಕರ್, ಹೇಮಾ ಮುತಾಲಿಕ, ಗೌರಿ ಸರ್ನೋಬತ್, ಶ್ವೇತಾ ಬಿಜಾಪುರೆ, ವರದಾ ಭಟ್, ಶೋಭಾ ರಘುನಾಥ, ಸುನೀತಾ ಭಟ್, ಶುಭಾ ಕಡಗದಕೈ, ಲತಾ ಕಟ್ಟಿ, ರವಿ ಆಚಾರ್ಯ, ಬಿ.ಎಸ್.ಪಾಟೀಲ, ನವೀನ್ ಭಟ್, ಶುಭಾ ಭಟ್ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.