ADVERTISEMENT

ಇಂದಿರಾ ಕ್ಯಾಂಟೀನ್‌ಗೆ ಕೇಂದ್ರದ ಅಧಿಕಾರಿ ಮೆಚ್ಚುಗೆ

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2017, 19:03 IST
Last Updated 14 ಡಿಸೆಂಬರ್ 2017, 19:03 IST
ಅಡುಗೆ ಮನೆಗೆ ದುರ್ಗಾ ಶಂಕರ್‌ ಮಿಶ್ರಾ (ಎಡದಿಂದ ಮೊದಲನೆಯವರು) ಭೇಟಿ ನೀಡಿದರು. ಮಹೇಂದ್ರ ಜೈನ್‌, ಎನ್‌.ಮಂಜುನಾಥ ಪ್ರಸಾದ್‌ ಇದ್ದಾರೆ.
ಅಡುಗೆ ಮನೆಗೆ ದುರ್ಗಾ ಶಂಕರ್‌ ಮಿಶ್ರಾ (ಎಡದಿಂದ ಮೊದಲನೆಯವರು) ಭೇಟಿ ನೀಡಿದರು. ಮಹೇಂದ್ರ ಜೈನ್‌, ಎನ್‌.ಮಂಜುನಾಥ ಪ್ರಸಾದ್‌ ಇದ್ದಾರೆ.   

ಬೆಂಗಳೂರು: ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಸಚಿವಾಲಯದ ಕಾರ್ಯದರ್ಶಿ ದುರ್ಗಾ ಶಂಕರ್ ಮಿಶ್ರಾ ಅವರು ಕೆ.ಆರ್‌.ಮಾರುಕಟ್ಟೆಯಲ್ಲಿರುವ ಇಂದಿರಾ ಕ್ಯಾಂಟೀನ್‌ ಹಾಗೂ ಎಸ್‌.ಪಿ.ರಸ್ತೆಯಲ್ಲಿರುವ ಕೇಂದ್ರೀಕೃತ ಅಡುಗೆ ಮನೆಗೆ ಗುರುವಾರ ಭೇಟಿ ನೀಡಿ ಯೋಜನೆಯ ಬಗ್ಗೆ ಮಾಹಿತಿ ಪಡೆದರು.

ಇಂದಿರಾ ಕ್ಯಾಂಟೀನ್‌ನ ಕಾರ್ಯನಿರ್ವಹಣೆ ಮತ್ತು ಯೋಜನೆಯ ಬಗ್ಗೆ ನಗರಾಭಿವೃದ್ಧಿ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಮಹೇಂದ್ರ ಜೈನ್‌ ಹಾಗೂ ಪಾಲಿಕೆ ಆಯುಕ್ತ ಎನ್‌.ಮಂಜುನಾಥ ಪ್ರಸಾದ್‌ ಮಾಹಿತಿ ನೀಡಿದರು.

ಕೇಂದ್ರೀಕೃತ ಅಡುಗೆ ಮನೆಯಲ್ಲಿ ಆಹಾರ ತಯಾರಿಕೆ, ಶುಚಿತ್ವಕ್ಕೆ ಕೈಗೊಂಡಿರುವ ಕ್ರಮಗಳು, ಕ್ಯಾಂಟೀನ್‌ಗಳಿಗೆ ಆಹಾರ ಸರಬರಾಜು, ತಿಂಡಿ– ಊಟದ ಮೆನು ಬಗ್ಗೆ ವಿವರಿಸಿದರು. ಅಲ್ಲಿ ಉಪಾಹಾರವನ್ನು ಸೇವಿಸಿದ ಮಿಶ್ರಾ ಅವರು ಮೆಚ್ಚುಗೆ ವ್ಯಕ್ತಪಡಿಸಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.