ADVERTISEMENT

ಎಂಜಿನಿಯರಿಂಗ್ ವಿದ್ಯಾರ್ಥಿಗಳಿಗೆ ಅನಿವಾಸಿ ಭಾರತೀಯನಿಂದ ಶಿಷ್ಯವೇತನ

​ಪ್ರಜಾವಾಣಿ ವಾರ್ತೆ
Published 20 ಡಿಸೆಂಬರ್ 2012, 20:32 IST
Last Updated 20 ಡಿಸೆಂಬರ್ 2012, 20:32 IST
ಬೆಂಗಳೂರು: ಬೆಂಗಳೂರು ವಿವಿಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡುವ ಬಡ ವಿದ್ಯಾರ್ಥಿಗಳಿಗೆ ಶಿಷ್ಯವೇತನ ನೀಡಲು ಅನಿವಾಸಿ ಭಾರತೀಯ ಬಿ.ಟಿ. ಲಕ್ಷ್ಮಣ 50 ಸಾವಿರ ಡಾಲರ್ (ಅಂದಾಜು 25 ಲಕ್ಷ ರೂಪಾಯಿ) ಮೊತ್ತದ ದತ್ತಿನಿಧಿ ನೀಡಿದ್ದಾರೆ.
 
ಗುರುವಾರ ನಡೆದ ಕಾರ್ಯಕ್ರಮದಲ್ಲಿ ಬೆಂಗಳೂರು ವಿವಿ ಕುಲಪತಿ ಪ್ರೊ.ಎನ್. ರಂಗಸ್ವಾಮಿ ಮತ್ತು ಬಿ.ಟಿ. ಲಕ್ಷ್ಮಣ ಒಡಂಬಡಿಕೆ ಪತ್ರಕ್ಕೆ ಸಹಿ ಹಾಕಿದರು. ಬಳಿಕ ಲಕ್ಷ್ಮಣ 50 ಸಾವಿರ ಡಾಲರ್ ಮೊತ್ತದ ಚೆಕ್‌ಅನ್ನು ಹಸ್ತಾಂತರಿಸಿದರು. `ಪ್ರತಿ ವರ್ಷ ಹತ್ತು ವಿದ್ಯಾರ್ಥಿಗಳಿಗೆ ವಾರ್ಷಿಕ ತಲಾ ಹತ್ತು ಸಾವಿರ ರೂಪಾಯಿ ಶಿಷ್ಯವೇತನ ನೀಡಲಾಗುತ್ತದೆ. ಮೊದಲ ವರ್ಷ ಆಯ್ಕೆಯಾದವರು ಮುಂದಿನ ಮೂರೂ ವರ್ಷ ಈ ಸೌಲಭ್ಯ ಪಡೆಯಲಿದ್ದಾರೆ' ಎಂದು ಪ್ರೊ. ರಂಗಸ್ವಾಮಿ ತಿಳಿಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.