ADVERTISEMENT

ಐವರಿಗೆ ಆಜೀವ ಸಾಧನಾ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 1 ಜೂನ್ 2017, 19:30 IST
Last Updated 1 ಜೂನ್ 2017, 19:30 IST
ಟಿ.ಎಂ. ರಾಮಾಚಾರ್
ಟಿ.ಎಂ. ರಾಮಾಚಾರ್   

ಬೆಂಗಳೂರು: ಹಿರಿಯ ನಾಗರಿಕರ ವಸತಿಗೃಹವಾದ ‘ವಿಎಲ್‌ಎನ್ ಪ್ರಬುದ್ಧಾಲಯ’ ನೀಡುವ 2017ನೇ ಸಾಲಿನ ‘ವಿಎಲ್‌ಎನ್. ನಿರ್ವಾಣ್–ಹಿರಿಯ ನಾಗರಿಕ ಆಜೀವ ಸಾಧನಾ’ ಪ್ರಶಸ್ತಿಗೆ ಐವರನ್ನು ಆಯ್ಕೆ ಮಾಡಲಾಗಿದೆ.

ಟಿ.ಎಂ.ರಾಮಾಚಾರ್, ಲಕ್ಷ್ಮಿ, ಡಾ.ಎನ್.ಬಾಲಸುಬ್ರಮಣಿಯನ್, ಫಿಲಾರ್ ಭವಾನಿಶಂಕರ್, ಎಸ್.ಕೆ.ಅಶ್ವತ್ಥನಾರಾಯಣ್  ಪ್ರಶಸ್ತಿಗೆ ಭಾಜನರಾಗಿದ್ದಾರೆ.

ಪ್ರಶಸ್ತಿಯು ಸ್ಮರಣಿಕೆ ಹಾಗೂ ₹ 10 ಸಾವಿರ ನಗದು ಬಹುಮಾನವನ್ನು ಒಳಗೊಂಡಿದ್ದು, ನಿಸರ್ಗ ಬಡಾವಣೆಯಲ್ಲಿರುವ ‘ವಿಎಲ್‌ಎನ್ ಪ್ರಬುದ್ಧಾಲಯ’ದಲ್ಲಿ ಜೂನ್‌ 4ರಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಪ್ರಶಸ್ತಿ ಪ್ರದಾನ ಮಾಡಲಾಗುತ್ತದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.