ADVERTISEMENT

ಜಿಲ್ಲಾ ಕೋರ್ಟ್‌: ಮೂಲಸೌಕರ್ಯ ಅಭಿವೃದ್ಧಿ- –ನ್ಯಾ.ಎನ್‌.ಕೆ.ಪಾಟೀಲ್‌

​ಪ್ರಜಾವಾಣಿ ವಾರ್ತೆ
Published 17 ಮಾರ್ಚ್ 2014, 19:52 IST
Last Updated 17 ಮಾರ್ಚ್ 2014, 19:52 IST

ಬೆಂಗಳೂರು: ‘ರಾಜ್ಯದ 29 ಜಿಲ್ಲೆ­ಗಳ­ಲ್ಲಿನ ನ್ಯಾಯಾಲಯಗಳ ಮೂಲ­ಸೌಕರ್ಯ ಅಭಿವೃದ್ಧಿಗೆ ಕ್ರಮ ಕೈಗೊಳ್ಳ­ಲಾಗುವುದು’ ಎಂದು ಹೈಕೋರ್ಟ್‌ ನ್ಯಾಯ­­ಮೂರ್ತಿ ಎನ್‌.ಕೆ.ಪಾಟೀಲ್ ಹೇಳಿದರು.

ನಗರದ ಎಸಿಎಂಎಂ ಕೋರ್ಟ್‌ ಆವರಣದಲ್ಲಿ ಸೋಮ­ವಾರ ಅಂಚೆ ಕಚೇರಿಯನ್ನು ಉದ್ಘಾಟಿಸಿ ಅವರು ಮಾತ­ನಾಡಿದರು. ‘ನನ್ನ ಅವಧಿಯಲ್ಲಿ ಎಲ್ಲಾ ನ್ಯಾಯಾಲಯ­ಗಳ­ಲ್ಲಿನ ಮೂಲ ಸೌಕರ್ಯ­ಗಳ ಕೊರತೆಯನ್ನು ಆದ್ಯತೆ ಮೇರೆಗೆ ಪರಿಹರಿಸಲು ಪ್ರಯತ್ನಿ­ಸುತ್ತೇನೆ. ಎಸಿಎಂಎಂ ನ್ಯಾಯಾ­ಲಯದ ಆವರಣದಲ್ಲಿ ಅಂಚೆ ಕಚೇರಿಯಿಲ್ಲದೆ ತೊಂದರೆ­ಯಾಗು­ತ್ತಿತ್ತು. ಬಹುದಿನಗಳ ಬೇಡಿಕೆಯಾದ ಅಂಚೆ ಕಚೇರಿ ಇಂದು ಉದ್ಘಾಟನೆಯಾಗಿದೆ’ ಎಂದರು.

‘ಅಂಚೆ ಕಚೇರಿಗೆ ಪ್ರತ್ಯೇಕ ಕಟ್ಟಡ ನಿರ್ಮಾಣಕ್ಕೆ ಯೋಜನೆ ರೂಪಿಸ­ಬೇಕು.  ನ್ಯಾಯಾಲಯದಲ್ಲಿ ಇನ್ನಿತರ ಕಾಮ­ಗಾರಿ­­­ಗಳಾ­ಗ­ಬೇಕು’ ಎಂದು ಹೇಳಿದರು.

ಕರ್ನಾಟಕ ವೃತ್ತದ ಮುಖ್ಯ ಪೋಸ್ಟ್‌­ಮಾಸ್ಟರ್‌ ಜನರಲ್‌ ಎಂ.ಎಸ್‌.­ರಾಮಾ­ನುಜಂ ಮಾತನಾಡಿ, ‘ಇದು ಅಂತ­ರ್ಜಾಲದ ಕಾಲವಾ­ದ್ದ­ರಿಂದ ಅಂಚೆ­ಸೇವೆಗೆ ಬೇಡಿಕೆ ಕಡಿಮೆ­ಯಾಗಿದೆ. ಆದ­ರೆ, ಸಂವಹನದ ಮುಖ್ಯ ಮಾರ್ಗ­ವಾಗಿ ಇಂದಿಗೂ ಅಂಚೆ ಇಲಾಖೆ ಕೆಲಸ ನಿರ್ವ­ಹಿಸುತ್ತಿದೆ’ ಎಂದರು.

‘ಅಂಚೆ ಕಚೇರಿಯು ಈಗ ಬ್ಯಾಂಕ್‌ ಮತ್ತು ಜೀವ ವಿಮಾ ಕಂಪೆನಿಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಉತ್ತಮ ಸೇವೆ ಒದಗಿಸುವ ಪ್ರಯತ್ನ ಮಾಡುತ್ತಿದೆ. ಟೆಲಿಗ್ರಾಂಗೆ ಬದಲಾಗಿ ಇ– ಪೋಸ್ಟ್ ಸೇವೆಯನ್ನು ಆರಂಭಿಸ­ಲಾಗಿದೆ’ ಎಂದು ಹೇಳಿದರು.

ನಗರ ವಕೀಲರ ಸಂಘದ ಅಧ್ಯಕ್ಷ ಕೆ.ಎನ್‌.ಸುಬ್ಬಾರೆಡ್ಡಿ ಮಾತನಾಡಿ, ‘ಎಸಿ­ಎಂ­ಎಂ ನ್ಯಾಯಾಲಯದ ಆವರಣ­ದಲ್ಲಿ ಅನೇಕ ಸಮಸ್ಯೆಗಳಿವೆ. ಆವ­ರಣ­ದಲ್ಲಿರುವ ಗಣಪತಿ ದೇವ­ಸ್ಥಾನ­ವನ್ನು ಸ್ಥಳಾಂತರಿಸಿ, ಪಾರ್ಕಿಂಗ್‌ ಸಮಸ್ಯೆ ನಿವಾರಿಸಬೇಕು. 1500 ಮಂದಿ ಕುಳಿತುಕೊಳ್ಳುವಂತಹ ಸಭಾಂಗಣ ನಿರ್ಮಾಣ­ವಾಗಬೇಕಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.