ಬೆಂಗಳೂರು: ಈ ಬಾರಿಯ ‘ನೀಟ್‘ ಪರೀಕ್ಷೆಯಲ್ಲಿ ಶ್ರೀ ಚೈತನ್ಯ ಕಾಲೇಜಿನ ವಿದ್ಯಾರ್ಥಿಗಳು ಉತ್ತಮ ಸಾಧನೆ ಮಾಡಿದ್ದಾರೆ. ರಾಷ್ಟ್ರಮಟ್ಟದ ಮುಕ್ತ ಕೆಟಗರಿ ವಿಭಾಗದಲ್ಲಿ 17 ವಿದ್ಯಾರ್ಥಿಗಳು ರ್ಯಾಂಕ್ ಪಡೆದಿದ್ದು ಕಾಲೇಜಿಗೆ ಕೀರ್ತಿ ತಂದಿದ್ದಾರೆ.
ಕಾಲೇಜಿನ ವಿದ್ಯಾರ್ಥಿಗಳಾದ ರೋಹನ್ ಪುರೋಹಿತ್ –2, ಮುಪ್ಪಿಡಿ ವರುಣ್–6, ಎ.ಅನಿರುದ್ದ್ ಬಾಬು–8, ಒ.ವಿ.ಎಸ್.ಎಚ್ ರೆಡ್ಡಿ–14, ಮೆಂಡಾ ಜೈದೀಪ್–16, ಕೊಡುರು ಶ್ರೀಹರ್ಷ–19, ಸಿದ್ದಾರ್ಥ ರವಿ–25, ವರದ್ ರವಿಕಿರಣ್–36, ಲೋಕೇಶ್ ಪಿ.ಎಂ–37, ಜಿ. ಶ್ರೀವತ್ಸವ್–57, ಎಸ್.ಜೆ.ಬಿ ರಫಿಯಾ ಕುಲ್ಸುಮ್–63, ಎ. ಸತೀಶ್ ರೆಡ್ಡಿ–68, ನಿತ್ಯಾ ಬೊರದ್– 71, ವೈ.ಎಸ್. ಕುಮಾರ್ ರೆಡ್ಡಿ–73, ಬಿ.ವಿ.ಎನ್. ತರುಣ್ ವರ್ಮಾ–81, ಆರ್.ಆರ್. ಸಿಎಚ್ ಅಭಿಷೇಕ್–92, ಎಂ. ಶ್ರೀಯುಧ ರೆಡ್ಡಿ–94ನೇ ರ್ಯಾಂಕ್ ಪಡೆದು ಸಾಧನೆ ,ಮಾಡಿದ್ದಾರೆ.
ಕಾಲೇಜಿಗೆ ಕೀರ್ತಿ ತಂದಿರುವ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರನ್ನು ಶ್ರೀ ಚೈತನ್ಯ ಶೈಕ್ಷಣಿಕ ಸಂಸ್ಥೆಗಳ ನಿರ್ದೇಶಕಿ ಸುಷ್ಮಾ ಮತ್ತು ಸಂಸ್ಥಾಪಕ ಅಧ್ಯಕ್ಷ ಡಾ.ಬಿ.ಎಸ್. ರಾವ್ ಅವರು ಅಭಿನಂದಿಸಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.