ADVERTISEMENT

ಮಾಸ್ತಿ ಪ್ರಶಸ್ತಿಗೆ ನಾಲ್ವರು ಲೇಖಕರ ಆಯ್ಕೆ

​ಪ್ರಜಾವಾಣಿ ವಾರ್ತೆ
Published 28 ಏಪ್ರಿಲ್ 2016, 20:03 IST
Last Updated 28 ಏಪ್ರಿಲ್ 2016, 20:03 IST
ಮಾಸ್ತಿ ಪ್ರಶಸ್ತಿಗೆ ನಾಲ್ವರು ಲೇಖಕರ ಆಯ್ಕೆ
ಮಾಸ್ತಿ ಪ್ರಶಸ್ತಿಗೆ ನಾಲ್ವರು ಲೇಖಕರ ಆಯ್ಕೆ   

ಬೆಂಗಳೂರು: ಡಾ.ಮಾಸ್ತಿ ವೆಂಕಟೇಶ ಅಯ್ಯಂಗಾರ್ ಪ್ರಶಸ್ತಿ ಸಮಿತಿಯು ನೀಡುವ 2016ನೇ ಸಾಲಿನ ಮಾಸ್ತಿ ವೆಂಕಟೇಶ ಅಯ್ಯಂಗಾರ್
ಪ್ರಶಸ್ತಿಗೆ ನಾಲ್ವರು ಲೇಖಕರು ಆಯ್ಕೆಯಾಗಿದ್ದಾರೆ.

ಪ್ರಶಸ್ತಿ ಪುರಸ್ಕೃತರು–ಎಚ್.ಎಸ್. ರಾಘವೇಂದ್ರ ರಾವ್ ಮತ್ತು ಟಿ.ಪಿ.ಅಶೋಕ (ವಿಮರ್ಶೆ), ರೇಖಾ ಕಾಖಂಡಕಿ (ಸೃಜನಶೀಲ),  ನೇಮಿಚಂದ್ರ (ವಿಜ್ಞಾನ ಸಾಹಿತ್ಯ)  ಅವರು ಪ್ರತಿಷ್ಠಿತ ಪ್ರಶಸ್ತಿಗೆ ಪಾತ್ರರಾಗಿದ್ದಾರೆ.

ಜೂನ್ ತಿಂಗಳಲ್ಲಿ ನಗರದಲ್ಲಿ ನಡೆಯುವ ಪ್ರಶಸ್ತಿ ಪ್ರದಾನ ಕಾರ್ಯಕ್ರಮದಲ್ಲಿ ₹25 ಸಾವಿರ ನಗದು ಮತ್ತು ಮಾಸ್ತಿ ಪ್ರಶಸ್ತಿ ಫಲಕ ನೀಡಿ ನಾಲ್ವರೂ ಲೇಖಕರನ್ನು ಸನ್ಮಾನಿಸಲಾಗುತ್ತದೆ ಎಂದು ಪ್ರಕಟಣೆ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.