ADVERTISEMENT

ಮೈಸೂರು, ವಿಜಾಪುರಕ್ಕೆ ಪ್ರಣವ್‌ ಮುಖರ್ಜಿ

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2013, 19:43 IST
Last Updated 17 ಸೆಪ್ಟೆಂಬರ್ 2013, 19:43 IST

ಬೆಂಗಳೂರು: ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ಅವರು ಸೆ. ೨೩ ಮತ್ತು ೨4 ರಂದು ರಾಜ್ಯಕ್ಕೆ ಅಧಿಕೃತ ಭೇಟಿ ನೀಡಲಿದ್ದಾರೆ.
ಸೆ.೨೩ರಂದು ಮೈಸೂರಿಗೆ ಭೇಟಿ ನೀಡುವ ಅವರು, ಅಂದು ಮಧ್ಯಾಹ್ನ ಜೆಎಸ್ಎಸ್ ಆಸ್ಪತ್ರೆಯ ನೂತನ ಕಟ್ಟಡ ಉದ್ಘಾಟಿಸಲಿದ್ದಾರೆ.

ನಂತರ ನಗರಕ್ಕೆ ಬರುವ ಅವರು  ರಾಜ್ಯಪಾಲ  ಎಚ್‌.ಆರ್‌. ಭಾರದ್ವಾಜ್ ರಾಜಭವನದಲ್ಲಿ ಸಂಜೆ  ಆಯೋಜಿಸಿರುವ ಔತಣಕೂಟದಲ್ಲಿ ಪಾಲ್ಗೊಳ್ಳಲಿದ್ದಾರೆ.

ಸೆ.೨೪ರಂದು ವಿಜಾಪುರದಲ್ಲಿ ಸೈನಿಕ ಶಾಲೆಯ ಸುವರ್ಣ ಮಹೋತ್ಸವ ಸಮಾರಂಭದಲ್ಲಿ ಭಾಗವಹಿಸಲಿದ್ದಾರೆ. ಬಳಿಕ ಚೆನ್ನೈಗೆ ಪ್ರಯಾಣಿಸಲಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.