ADVERTISEMENT

ರಸ್ತೆಯಲ್ಲೇ ಕಸದ ರಾಶಿ

ದುರ್ವಾಸನೆ, ರಸ್ತೆ ಗುಂಡಿಗೆ ನಿವಾಸಿಗಳು ಹೈರಾಣು

​ಪ್ರಜಾವಾಣಿ ವಾರ್ತೆ
Published 16 ಅಕ್ಟೋಬರ್ 2017, 19:30 IST
Last Updated 16 ಅಕ್ಟೋಬರ್ 2017, 19:30 IST
ರಸ್ತೆಯಲ್ಲೇ ಕಸದ ರಾಶಿ
ರಸ್ತೆಯಲ್ಲೇ ಕಸದ ರಾಶಿ   

ಬೆಂಗಳೂರು: 'ನಗರವನ್ನು ಕಸಮುಕ್ತಗೊಳಿಸುವುದಾಗಿ ಮುಖ್ಯಮಂತ್ರಿ ಮತ್ತು ಮೇಯರ್‌ ಇಬ್ಬರೂ ಹೇಳುತ್ತಲೇ ಇದ್ದಾರೆ. ಆದರೆ, ನಗರದಲ್ಲಿ ಕಸ ವಿಲೇವಾರಿ ಸರಿಯಾಗಿ ನಡೆಯದೆ, ನಡು ರಸ್ತೆಗಳಲ್ಲೇ ಕಸದ ರಾಶಿಗಳು ಕಾಣಿಸಿಕೊಳ್ಳುತ್ತಿವೆ.

ಕೊಳೆತು ದುರ್ನಾತ ಬೀರುತ್ತಿರುವ ಕಸ ಜನವಸತಿ ಪ್ರದೇಶಗಳ ನೈರ್ಮಲ್ಯವನ್ನೂ ಕೆಡಿಸುತ್ತಿದೆ. ಜನರು ಮೂಗುಮುಚ್ಚಿಕೊಂಡು ತಿರುಗಾಡುವ ಪರಿಸ್ಥಿತಿ ತಲೆದೋರಿದೆ' ಎಂದು ನಿವಾಸಿಗಳು ಅಳಲು ತೋಡಿಕೊಂಡಿದ್ದಾರೆ.

‘ದೊಡ್ಡಕಲ್ಲಸಂದ್ರದ ನಾರಾಯಣನಗರ ಮೊದಲ ಹಂತದಲ್ಲಿ ಕಸ ವಿಲೇವಾರಿಯಾಗುತ್ತಿಲ್ಲ. ಟ್ರಕ್‌ಗಳಲ್ಲಿ ಕಸ ತಂದು ನಡು ರಸ್ತೆಗಳಿಗೆ ಸುರಿಯುವುದು ನಿರಂತರವಾಗಿ ನಡೆಯುತ್ತಿದೆ. ಕನಕಪುರ ರಸ್ತೆಯಿಂದ ಆವಲಹಳ್ಳಿಗೆ ಹೋಗುವ ಜೋಡಿ ರಸ್ತೆ ಕಸದಿಂದ ತುಂಬಿ ಹೋಗಿದ್ದು, ದುರ್ನಾತ ಬೀರುತ್ತಿದೆ. ಈ ರಸ್ತೆಯಲ್ಲಿ ಸಂಚರಿಸುವ ಬೈಕ್‌ ಸವಾರರು, ಪಾದಚಾರಿಗಳು ದುರ್ವಾಸನೆ ಸಹಿಸಲಾಗದೆ, ಮೂಗು ಮುಚ್ಚಿಕೊಳ್ಳುವ ಸ್ಥಿತಿ ಇದೆ’ ಎಂದು ಸ್ಥಳೀಯರು ದೂರುತ್ತಾರೆ.

ADVERTISEMENT

‘ಕಸದಿಂದ ಉಂಟಾಗುತ್ತಿರುವ ದುರ್ವಾಸನೆಗೆ ಮುಕ್ತಿ ಕಾಣಿಸಲು ಈ ಭಾಗವನ್ನು ಪ್ರತಿನಿಧಿಸುವ ಶಾಸಕರು ಮತ್ತು ಪಾಲಿಕೆ ಸದಸ್ಯರು ಹಾಗೂ ಪಾಲಿಕೆ ಅಧಿಕಾರಿಗಳು ಮುಂದಾಗಬೇಕು’ ಎಂದು ಒತ್ತಾಯಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.