ADVERTISEMENT

ರೈತನಿಗೆ ಕೊಲೆ ಬೆದರಿಕೆ

​ಪ್ರಜಾವಾಣಿ ವಾರ್ತೆ
Published 7 ಅಕ್ಟೋಬರ್ 2012, 19:30 IST
Last Updated 7 ಅಕ್ಟೋಬರ್ 2012, 19:30 IST

ಮಾಗಡಿ: ಅಮಾಯಕ ರೈತರೊಬ್ಬರ ಹಿಡುವಳಿ ಜಮೀನಿನಲ್ಲಿ ಅಪರಿಚಿತರು ಅಕ್ರಮವಾಗಿ ಮಣ್ಣನ್ನು ತೆಗೆದು ಸಾಗಿಸುತ್ತಿದ್ದು ಪ್ರತಿರೋಧ ಒಡ್ಡಿದ ಹೊಲದ ಮಾಲೀಕರಿಗೆ ಜೀವ ಬೆದರಿಕೆ ಒಡ್ಡಿರುವ ಘಟನೆ ಭೈರನಹಳ್ಳಿಯಲ್ಲಿ ಬೆಳಕಿಗೆ ಬಂದಿದೆ.

ಮಾಗಡಿಯಿಂದ ಹುಲಿಯೂರು ದುರ್ಗಕ್ಕೆ ಹೋಗುವ ರಸ್ತೆಯ ಎಡಭಾಗದಲ್ಲಿ ಇರುವ ಪುಟ್ಟ ಗ್ರಾಮ ಭೈರನಹಳ್ಳಿ. ಈ ಗ್ರಾಮದಲ್ಲಿ ಇರುವ ರೈತ ಸಿದ್ದಗಂಗಪ್ಪ ಎಂಬುವರು ಕಲ್ಯಾಣಮ್ಮ ಸಿದ್ದಲಿಂಗಯ್ಯ ಅವರಿಗೆ ಸೇರಿರುವ ಸರ್ವೇ ನಂಬರ್114/2ಬಿ ಸಂಖ್ಯೆಯ ಜಮೀನನ್ನು ಭೋಗ್ಯಕ್ಕೆ ಹಾಕಿಸಿ ಕೊಂಡು ವ್ಯವಸಾಯ ಮಾಡುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.