ನೆಲಮಂಗಲ: ಪಟ್ಟಣದ ತಲಕಾಡು ಸುಬ್ಬರಾಯರ ಬೀದಿಯು ಹಲವು ವರ್ಷಗಳಿಂದ ಡಾಂಬರು ಕಾಣದೆ ಅವ್ಯವಸ್ಥೆಯ ಆಗರವಾಗಿದೆ.
‘ಮಳೆ ಬಂದರೆ ರಸ್ತೆ ಕೆಸರು ಗದ್ದೆಯಂತಾಗಿ ಸಂಚಾರ ನಡೆಸುವುದು ಕಷ್ಟಕರವಾಗುತ್ತದೆ. ಬೈಕ್ ಸವಾರರು ಈ ರಸ್ತೆಯಲ್ಲಿ ಬಿದ್ದಿದ್ದಾರೆ’ ಸ್ಥಳೀಯ ನಿವಾಸಿ ರಾಕೇಶ್ ದೂರಿದರು.
ಮಳೆ ಬಂದಾಗ ವಾಹನ ಸವಾರರಿಗೆ ಕೆಸರ ಸಿಂಚನ ಖಾತರಿ. ಪಟ್ಟಣದಲ್ಲಿ ಇನ್ನೂ ಹಲವು ರಸ್ತೆಗಳ ಪರಿಸ್ಥಿತಿ ಹೀಗೆ ಇದೆ.
ಸಂಬಂಧಪಟ್ಟವರು ಶೀಘ್ರವಾಗಿ ಕ್ರಮ ತೆಗೆದುಕೊಳ್ಳಬೇಕು ಎಂದು ನಿವಾಸಿ ಫಾಲನೇತ್ರ ಒತ್ತಾಯಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.