ADVERTISEMENT

ಪ್ರಸನ್ನ ಅವರಿಗೆ ‘ಚಾಕ್ಯಾರ್ ಪುರಸ್ಕಾರ’

​ಪ್ರಜಾವಾಣಿ ವಾರ್ತೆ
Published 10 ಜನವರಿ 2019, 20:21 IST
Last Updated 10 ಜನವರಿ 2019, 20:21 IST
ಪ್ರಸನ್ನ
ಪ್ರಸನ್ನ   

ಬೆಂಗಳೂರು: ರಂಗ ನಿರ್ದೇಶಕ ಪ್ರಸನ್ನ ಅವರು ಕೇರಳ ಸಂಗೀತ ನಾಟಕ ಅಕಾಡೆಮಿಯು ಕೊಡಮಾಡುವ ಪ್ರತಿಷ್ಠಿತ ‘ಅಮ್ಮನ್ನೂರ್ ಮಾಧವನ್ ಚಾಕ್ಯಾರ್ ಪುರಸ್ಕಾರ’ ಭಾಜನರಾಗಿದ್ದಾರೆ. ಪ್ರಶಸ್ತಿಯು ₹ 3 ಲಕ್ಷ ನಗದು ಒಳಗೊಂಡಿದೆ.

ಈ ಹಿಂದೆ ಬಾದಲ್‌ ಸರ್ಕಾರ್‌, ಸಾಬಿತ್ರಿ ಹೈಸ್ನಂ, ಗಿರೀಶ ಕಾರ್ನಾಡ ಅವರಿಗೆ ಈ ಪ್ರಶಸ್ತಿ ಸಂದಿದೆ.

ಜ.20 ರಂದು ಸಂಜೆ 5ಕ್ಕೆ ತ್ರಿಶೂರ್‌ನಲ್ಲಿ ನಡೆಯಲಿರುವ ‘ಕೇರಳ ಅಂತರರಾಷ್ಟ್ರೀಯ ನಾಟಕ ಉತ್ಸವ (ಇಟ್ಫಾಕ್)’ ಉದ್ಘಾಟನೆ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.