ADVERTISEMENT

ಅಪಘಾತ: ಸಿಸಿಬಿ ಪೊಲೀಸರ ಜೀಪು ಜಖಂ

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2019, 20:13 IST
Last Updated 4 ಅಕ್ಟೋಬರ್ 2019, 20:13 IST
ಅಪಘಾತದಲ್ಲಿ ಜಖಂಗೊಂಡ ಸಿಸಿಬಿಯ ಜೀಪು
ಅಪಘಾತದಲ್ಲಿ ಜಖಂಗೊಂಡ ಸಿಸಿಬಿಯ ಜೀಪು   

ಬೆಂಗಳೂರು: ಯಲಹಂಕ ಬಳಿಯ ಭಾರತೀಯ ವಾಯುನೆಲೆ ಸಮೀಪ ಶುಕ್ರವಾರ ರಾತ್ರಿ 11.30ರ ಸುಮಾರಿಗೆ ಅಪಘಾತ ಸಂಭವಿಸಿದ್ದು, ಸಿಸಿಬಿ ಪೊಲೀಸರ ಜೀಪು ಜಖಂಗೊಂಡಿದೆ.

‘ಸರ್ವೀಸ್‌ ರಸ್ತೆಯಿಂದ ಹೆದ್ದಾರಿಗೆ ಪ್ರವೇಶಿಸುವಾಗ ಚಾಲಕ ಕುಮಾರಸ್ವಾಮಿ ನಿರ್ಲಕ್ಷ್ಯದಿಂದ ಜೀಪು ಚಲಾಯಿಸಿದ್ದರು. ಅದೇ ವೇಳೆ ತೆಲಂಗಾಣ ನೋಂದಣಿ ಸಂಖ್ಯೆಯ ಲಾರಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಹೊರಟಿತ್ತು. ಜೀಪನ್ನು ರಸ್ತೆ ವಿಭಜಕಕ್ಕೆ ಗುದ್ದಿಸಿದ್ದ ಚಾಲಕ, ನಂತರ ಲಾರಿಗೆ ಡಿಕ್ಕಿ ಹೊಡೆಸಿದ್ದರು’ ಎಂದು ಪ್ರತ್ಯಕ್ಷದರ್ಶಿಯೊಬ್ಬರು ಹೇಳಿದರು.

‘ಸಿಸಿಬಿ ಇನ್‌ಸ್ಪೆಕ್ಟರ್‌ ಕೇಶವ್‌ಮೂರ್ತಿ ಅವರಿಗೆ ಸೇರಿದ್ದ ಜೀಪಿನಲ್ಲಿ ಚಾಲಕ ಕುಮಾರಸ್ವಾಮಿ ಮಾತ್ರ ಇದ್ದ. ಗಾಯಗೊಂಡ ಅವರನ್ನು ಸ್ಥಳೀಯರೇ ಆಸ್ಪತ್ರೆಗೆ ಕರೆದೊಯ್ದರು. ಅವರು ಮದ್ಯ ಕುಡಿದು ಜೀಪು ಚಲಾಯಿಸಿರಬಹುದೆಂಬ ಅನುಮಾನ ಇದೆ. ಯಲಹಂಕ ಸಂಚಾರ ಪೊಲೀಸರು ಸ್ಥಳಕ್ಕೆ ಬಂದು ಮಾಹಿತಿ ಪಡೆದುಕೊಂಡಿದ್ದಾರೆ’ ಎಂದು ಅವರು ಮಾಹಿತಿ ನೀಡಿದರು.

ADVERTISEMENT

ಅಪಘಾತದಿಂದ ಹೆದ್ದಾರಿಯಲ್ಲಿ ಕೆಲಕಾಲ ವಾಹನ ಸಂಚಾರ ಸ್ಥಗಿತಗೊಂಡಿತ್ತು. ಅಪಘಾತದ ವಾಹನಗಳನ್ನು ತೆರವುಗೊಳಿಸಿದ ನಂತರವೇ ವಾಹನಗಳ ಸಂಚಾರ ಆರಂಭವಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.