ADVERTISEMENT

ಖಾತೆ ಹಂಚಿಕೆ ಸಿ.ಟಿ.ರವಿ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 26 ಆಗಸ್ಟ್ 2019, 20:06 IST
Last Updated 26 ಆಗಸ್ಟ್ 2019, 20:06 IST
   

ಬೆಂಗಳೂರು: ‘ನಾನು ಸ್ವಾಭಿಮಾನಿ, ಪಕ್ಷ ನಿಷ್ಠ, ನನ್ನ ವಿಚಾರವನ್ನು ಯಾವ ವೇದಿಕೆಯಲ್ಲಿ ಹೇಳಬೇಕೊ ಅಲ್ಲೇ ಹೇಳುತ್ತೇನೆ’ ಎಂದು ಹಿರಿಯ ಸಚಿವ ಸಿ.ಟಿ.ರವಿ ಹೇಳಿದರು.

ಪ್ರವಾಸೋದ್ಯಮ ಖಾತೆ ಹಂಚಿಕೆ ಮಾಡಿದ್ದರಿಂದ ಅಸಮಾಧಾನಗೊಂಡ ರವಿ ರಾಜೀನಾಮೆ ನೀಡಿದ್ದಾರೆ ಎಂಬ ವದಂತಿ ಕುರಿತು ‘ಪ್ರಜಾವಾಣಿ’ ಜತೆ ಮಾತನಾಡಿದ ಅವರು, ‘ಸ್ವಾಭಿಮಾನಿಯಾಗಿರುವ ನಾನು ಯಡಿಯೂರಪ್ಪ ಬಳಿ ಹೋಗಿ ಇಂತಹ ಖಾತೆ ಕೊಡಿ ಎಂದು ಬೇಡಿಕೆ ಸಲ್ಲಿಸಲಿಲ್ಲ. ಅಸಮಾಧಾನವೂ ಆಗಿಲ್ಲ’ ಎಂದರು.

ಯಡಿಯೂರಪ್ಪ ಅವರಿಗೆ ರಾಜೀನಾಮೆ ಪತ್ರ ಕಳುಹಿಸಿದ್ದೀರೋ ಎಂಬ ಪ್ರಶ್ನೆಗೆ ನೇರವಾಗಿ ಉತ್ತರಿಸದ ಅವರು, ‘ನಾನು ಸಿದ್ಧಾಂತ ಮತ್ತು ಪಕ್ಷ ನಿಷ್ಠ. ಅನ್ಯಾಯ ಆದಾಗ ಹೋರಾಟ ಮಾಡುವ ಗುಣ ನನ್ನದು. ಖಾತೆಯೇ ಕೇಳಿಲ್ಲ ಎಂದು ಮೇಲೆ ಅಸಮಾಧಾನ ಪ್ರಶ್ನೆ ಎಲ್ಲಿಂದ ಬರುತ್ತದೆ. ನನ್ನ ನಿರ್ಧಾರವನ್ನು ಎಲ್ಲಿ ಹೇಳಬೇಕೋ ಅಲ್ಲಿಯೇ ಹೇಳುತ್ತೇನೆ’ ಎಂದರು.

ADVERTISEMENT

‘ನಾಳೆ ಪಕ್ಷದ ಅಧ್ಯಕ್ಷರ ಅಧಿಕಾರ ಸ್ವೀಕಾರ ಕಾರ್ಯಕ್ರಮಕ್ಕೆ ಕರೆದಿದ್ದಾರೆ. ಅಲ್ಲಿ ನನಗೆ ಪ್ರಸ್ತಾವಿಕವಾಗಿ ಮಾತನಾಡಲು ಹೇಳಿದ್ದಾರೆ. ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇನೆ’ ಎಂದೂ ರವಿ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.