ADVERTISEMENT

ಐಎಎಸ್ ಅಧಿಕಾರಿಗಳ ವರ್ಗಾವಣೆ

​ಪ್ರಜಾವಾಣಿ ವಾರ್ತೆ
Published 28 ಜುಲೈ 2020, 10:24 IST
Last Updated 28 ಜುಲೈ 2020, 10:24 IST
   

ಬೆಂಗಳೂರು:ಕೃಷಿ ಇಲಾಖೆ ಹೆಚ್ಚುವರಿ ಮುಖ್ಯ ಕಾರ್ಯದರ್ಶಿ ಡಾ.ರಾಜಕುಮಾರ್‌ ಕತ್ರಿ ಅವರಿಗೆ ಕಾರ್ಮಿಕ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಿದ್ದು, ಒಟ್ಟು 12 ಅಧಿಕಾರಿಗಳನ್ನು ವರ್ಗಾವಣೆ ಮಾಡಲಾಗಿದೆ.

ನಾಗಾಂಬಿಕಾ ದೇವಿ ಅವರಿಗೆ ಹಾಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಜತೆಗೆ ಸಮಾಜ ಕಲ್ಯಾಣ ಇಲಾಖೆಯನ್ನು ಹೆಚ್ಚುವರಿಯಾಗಿ ನೀಡಲಾಗಿದೆ.

ಮನೋಜ್‌ ಜೈನ್‌– ವಿಶೇಷ ಆಯುಕ್ತ (ಯೋಜನೆ) ಬಿಬಿಎಂಪಿ, ರಾಜೇಂದ್ರ ಚೋಳನ್ ಪಿ– ವಿಶೇಷ ಆಯುಕ್ತ (ಹಣಕಾಸು–ಐಟಿ) ಬಿಬಿಎಂಪಿ, ವಿನೋತ್ ಪ್ರಿಯಾ– ನಿರ್ದೇಶಕರು, ಎಂಎಸ್‌ಎಂಇ, ಬಿ.ಆರ್‌.ಮಮತಾ– ಹೆಚ್ಚುವರಿ ನಿರ್ದೇಶಕರು, ಸಕಾಲ್‌ ಮಿಷನ್‌, ಸಿಂಧು ಬಿ.ರೂಪೇಶ್–ನಿರ್ದೇಶಕರು, ಎಲೆಕ್ಟ್ರಾನಿಕ್‌ ಡೆಲಿವರಿ ಆಫ್‌ ಸಿಟಿಜನ್‌ ಸರ್ವಿಸಸ್‌.

ADVERTISEMENT

ಪೊನ್ನಮ್ಮಾಳ್‌ ಸುನಿಲ್‌ ಕುಮಾರ್‌– ಜಿಲ್ಲಾಧಿಕಾರಿ, ವಿಜಯಪುರ, ರಾಜೇಂದ್ರ ಕೆ.ವಿ– ಜಿಲ್ಲಾಧಿಕಾರಿ, ದಕ್ಷಿಣಕನ್ನಡ, ದರ್ಶನ್‌ ಎಚ್‌.ವಿ– ಸಿಇಒ, ಜಿಲ್ಲಾಪಂಚಾಯಿತಿ, ಬೆಳಗಾವಿ, ಎಚ್‌.ಎನ್‌.ಗೋಪಾಲಕೃಷ್ಣ– ನಿರ್ದೇಶಕ, ಮೈಶುಗರ್‌, ಕವಿತಾ ಎಸ್‌. ಮಣ್ಣಿಕೇರಿ– ಜಿಲ್ಲಾಧಿಕಾರಿ, ಚಿತ್ರದುರ್ಗ, ವೈ.ಎಸ್‌.ಪಾಟೀಲ– ಜಂಟಿ ನಿರ್ದೇಶಕ, ಆಡಳಿತಾತ್ಮಕ ಸಂಸ್ಥೆ, ಮೈಸೂರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.