ಬೆಂಗಳೂರು: ತಮಿಳುನಾಡಿನಿಂದ ನಗರಕ್ಕೆ ಬರುವ ಪ್ರಯಾಣಿಕರನ್ನು ಕೋವಿಡ್–19 ತಪಾಸಣೆಗೆ ಒಳಪಡಿಸಲು ನಿರ್ಮಿಸಲಾಗಿದ್ದ ದೊಡ್ಡ ಗಾತ್ರ ಶೆಡ್ ಮಳೆಯಿಂದಾಗಿ ಕಳಚಿ ಬಿದ್ದಿದೆ.
ಆನೇಕಲ್ ಹಾಗೂ ಸುತ್ತಮುತ್ತ ಭಾನುವಾರ ಮಧ್ಯಾಹ್ನ ಮಳೆ ಆರ್ಭಟ ಜೋರಾಗಿತ್ತು. ಗಾಳಿಯೂ ವೇಗವಾಗಿ ಬೀಸಿತ್ತು.
ದಿನದ 24 ಗಂಟೆಯೂ ವೈದ್ಯರು, ವೈದ್ಯಕೀಯ ಸಿಬ್ಬಂದಿ ಹಾಗೂ ಪೊಲೀಸರು ಶೆಡ್ನಲ್ಲಿ ಕೆಲಸ ಮಾಡುತ್ತಿದ್ದರು. ಮಳೆ ಬಂದ ವೇಳೆಯಲ್ಲೂ ಅವರೆಲ್ಲ ಶೆಡ್ನಲ್ಲಿದ್ದರು. ಶೆಡ್ ಕಳಚಿ ಬಿದ್ದು, ಕೆಲ ಅವಶೇಷಗಳು ಹಾರಿ ಹೋಗಿವೆ. ಸಿಬ್ಬಂದಿ ಶೆಡ್ನಿಂದ ಹೊರಗೆ ಬಂದು ಬೇರೆಡೆ ಆಶ್ರಯ ಪಡೆದು ಅಪಾಯದಿಂದ ಪಾರಾಗಿದ್ದಾರೆ. ಶೆಡ್ನಲ್ಲಿದ್ದ ಕಂಪ್ಯೂಟರ್ ಸೇರಿ ಹಲವು ವಸ್ತುಗಳಿಗೆ ಹಾನಿಯಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.