ADVERTISEMENT

‘ಜಲಮೂಲ ಮಾಹಿತಿಗೆ ಇಸ್ರೊ ನೆರವು’

​ಪ್ರಜಾವಾಣಿ ವಾರ್ತೆ
Published 17 ಸೆಪ್ಟೆಂಬರ್ 2019, 19:38 IST
Last Updated 17 ಸೆಪ್ಟೆಂಬರ್ 2019, 19:38 IST
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಕುಲಪತಿ ಪ್ರೊ. ಕೆ. ಆರ್‌. ವೇಣುಗೋಪಾಲ್‌,  ಇಸ್ರೊ ನಿರ್ದೇಶಕ ಪ್ರೊ. ಪಿ. ಜಿ. ದಿವಾಕರ್‌,  ಕುಲಸಚಿವ ಪ್ರೊ. ಬಿ. ಕೆ. ರವಿ ಇದ್ದರು.
ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ಸೋಮವಾರ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮ ಕುರಿತ ರಾಷ್ಟ್ರೀಯ ಸಮ್ಮೇಳನದಲ್ಲಿ ಕುಲಪತಿ ಪ್ರೊ. ಕೆ. ಆರ್‌. ವೇಣುಗೋಪಾಲ್‌,  ಇಸ್ರೊ ನಿರ್ದೇಶಕ ಪ್ರೊ. ಪಿ. ಜಿ. ದಿವಾಕರ್‌,  ಕುಲಸಚಿವ ಪ್ರೊ. ಬಿ. ಕೆ. ರವಿ ಇದ್ದರು.   

ಬೆಂಗಳೂರು: ಇಂದಿನ ತಂತ್ರಜ್ಞಾನದ ಯುಗದಲ್ಲಿ ಭಾರತೀಯ ಬಾಹ್ಯಾಕಾಶ ಸಂಶೋಧನಾ ಸಂಸ್ಥೆ (ಇಸ್ರೊ)ಪ್ರಾಯೋಜಿತ ಭುವನ ಇ-ಪೋರ್ಟಲ್‌ನಮುಖಾಂತರ ಜನ ಸಾಮಾನ್ಯರು ಕೂಡಾ ಜಲಮೂಲಗಳು ಮತ್ತು ಸಂಪನ್ಮೂಲಗಳ ಬಗ್ಗೆ ಬೆರಳ ತುದಿಯಲ್ಲಿ ಮಾಹಿತಿ ಪಡೆಯಬಹುದು ಎಂದು ಇಸ್ರೊದ ನಿರ್ದೇಶಕ ಡಾ.ಪಿ. ಜಿ. ದಿವಾಕರ್ ಹೇಳಿದರು.

ಬೆಂಗಳೂರು ವಿಶ್ವವಿದ್ಯಾಲಯದ ಜ್ಞಾನಭಾರತಿ ಭೂಗೋಳ ವಿಜ್ಞಾನವಿಭಾಗದಲ್ಲಿ ಸೋಮವಾರ ಯುಜಿಸಿ ಎಸ್‌ಎಪಿಡಿ ಆರ್‌ಎಸ್‌–11ಯೋಜನೆಯಡಿಯಲ್ಲಿ ಮಣ್ಣು ಮತ್ತು ನೀರು ಸಂರಕ್ಷಣಾ ಕ್ರಮಗಳು ಮತ್ತು ಜಿಯೋಸ್ಪೇಷಿಯಲ್ ಪರಿಹಾರಗಳು ಎಂಬ ವಿಷಯವಾಗಿ ಎರಡು ದಿನಗಳ ರಾಷ್ಟ್ರೀಯ ಸಮ್ಮೇಳನದಲ್ಲಿ ಅವರು ಮಾತನಾಡಿದರು.

‘ಮಣ್ಣು ಮತ್ತು ನೀರಿನ ಸಂರಕ್ಷಣೆಯು ಮಾನವನ ಮುಖ್ಯ ಕರ್ತವ್ಯವಾಗಿದ್ದು ಮತ್ತು ಅದರ ಅವಶ್ಯಕತೆಯು ಮಾನವನಿಗೆ ಅತ್ಯಮೂಲ್ಯವಾಗಿದೆ’ ಎಂದರು.

ADVERTISEMENT

ಕುಲಪತಿ ಪ್ರೊ.ಕೆ. ಆರ್‌. ವೇಣುಗೋಪಾಲ್, ಕುಲಸಚಿವ ಪ್ರೊ.ಬಿ. ಕೆ. ರವಿ,ಭೂಗೋಳ ವಿಜ್ಞಾನವಿಭಾಗದ ಮುಖ್ಯಸ್ಥ ಪ್ರೊ.ಅಶೋಕ್ ಡಿ. ಹಂಜಗಿ, ಡಾ.ದಿವ್ಯಾ ರಾಜೇಶ್ವರಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.