ADVERTISEMENT

ಹಣ ವಾಪಸು ಕೊಡದ್ದಕ್ಕೆ ಸ್ನೇಹಿತನ ಕೊಲೆ

​ಪ್ರಜಾವಾಣಿ ವಾರ್ತೆ
Published 6 ಜನವರಿ 2022, 20:19 IST
Last Updated 6 ಜನವರಿ 2022, 20:19 IST

ಬೆಂಗಳೂರು: ಸಾಲ ಪಡೆದಿದ್ದ₹1,500 ಮೊತ್ತವನ್ನು ವರ್ಷವಾದರೂ ಮರುಪಾವತಿ ಮಾಡಲಿಲ್ಲ ಎಂದು ಆಕ್ರೋಶಗೊಂಡ ಯುವಕರ ಗುಂಪೊಂದು ಸ್ನೇಹಿತನ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದೆ. ಈ ಸಂಬಂಧ ಕೋಣನಕುಂಟೆ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

‘ಮೆಹಬೂಬ್‌ (19) ಮೃತ ಯುವಕ. ಯಾದಗಿರಿ ಮೂಲದವನಾಗಿರುವ ಆತ, ಚುಂಚಘಟ್ಟದ ಶ್ರೀನಿಧಿ ಲೇಔಟ್‌ನಲ್ಲಿ ಕುಟುಂಬದೊಂದಿಗೆ ಸುಮಾರು 10 ವರ್ಷದಿಂದ ವಾಸವಿದ್ದ. ಹರಿನಗರದ ಕಿರಣ್‌ ಹಾಗೂ ಆತನ ಸ್ನೇಹಿತರು ಮೆಹಬೂಬ್‌ನನ್ನು ಹತ್ಯೆ ಮಾಡಿದ್ದಾಗಿ ದೂರಿನಲ್ಲಿ ಆರೋಪಿಸಲಾಗಿದೆ. ಆರೋಪಿಗಳು ತಲೆ ಮರೆಸಿಕೊಂಡಿದ್ದಾರೆ’ ಎಂದು ಪೊಲೀಸ್‌ ಅಧಿಕಾರಿಯೊಬ್ಬರು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT