ADVERTISEMENT

ಕೋವಿಡ್‌ ಸೇನಾನಿಗಳಿಗೆ ಪಾದಪೂಜೆ: ವೆಂಕಟರೆಡ್ಡಿ

​ಪ್ರಜಾವಾಣಿ ವಾರ್ತೆ
Published 27 ಅಕ್ಟೋಬರ್ 2021, 4:05 IST
Last Updated 27 ಅಕ್ಟೋಬರ್ 2021, 4:05 IST
ಬಿಜೆಪಿ ಮುಖಂಡ ಬಂಡೆ ಎಸ್.ರಾಜು ವೈದ್ಯರಿಗೆ ಪಾದ ಪೂಜೆ ಮಾಡಿದರು. ಮುಖಂಡರಾದ ಶಿವರಾಜ್, ಮಂಜುಳಾ ದೇವಿ, ಅನಿತಾ ರೆಡ್ಡಿ, ಗೋಪಾಲ್, ವೆಂಕಟ ರೆಡ್ಡಿ ಇದ್ದರು.
ಬಿಜೆಪಿ ಮುಖಂಡ ಬಂಡೆ ಎಸ್.ರಾಜು ವೈದ್ಯರಿಗೆ ಪಾದ ಪೂಜೆ ಮಾಡಿದರು. ಮುಖಂಡರಾದ ಶಿವರಾಜ್, ಮಂಜುಳಾ ದೇವಿ, ಅನಿತಾ ರೆಡ್ಡಿ, ಗೋಪಾಲ್, ವೆಂಕಟ ರೆಡ್ಡಿ ಇದ್ದರು.   

ಕೆ.ಆರ್.ಪುರ:ಕೋವಿಡ್‌ ಅವಧಿಯಲ್ಲಿ ಸೇವೆ ಸಲ್ಲಿಸಿದ ವೈದ್ಯರು, ಆಶಾ ಮತ್ತು ಅಂಗನವಾಡಿ ಕಾರ್ಯಕರ್ತೆಯರು ಹಾಗೂ ಕೋವಿಡ್‌ ಸೇನಾನಿಗಳಿಗೆಹಿರಿಯ ನಾಗರಿಕರ ಹಿತರಕ್ಷಣಾ ಸಮಿತಿ ವತಿಯಿಂದಪಾದ ಪೂಜೆ ಹಾಗೂ ಸನ್ಮಾನ ಕಾರ್ಯಕ್ರಮವಿಜಿನಾಪುರದಲ್ಲಿ ಮಂಗಳವಾರ ನಡೆಯಿತು.

ಬಳಿಕ ಮಾತನಾಡಿದ ಸಂಘದ ಅಧ್ಯಕ್ಷ ವೆಂಕಟರೆಡ್ಡಿ,‘ಕೋವಿಡ್‌ ಸಮಯದಲ್ಲಿ ವೈದ್ಯರ ಸೇವೆ ಶ್ಲಾಘನೀಯ. ಯಾವುದೇ ರಜೆ ತೆಗೆದುಕೊಳ್ಳದೆ, ನಿರಂತರವಾಗಿ ಲಸಿಕಾ ಅಭಿಯಾನದಲ್ಲಿ ತೊಡಗಿದ್ದಾರೆ. ಅವರಿಗೆ ಪಾದ ಪೂಜೆ ಮಾಡಿ ಗೌರವಿಸುವುದು ಒಳ್ಳೆಯ ಕೆಲಸ’ ಎಂದರು.

ಬಿಜೆಪಿ ಸ್ಥಳೀಯ ಮುಖಂಡಬಂಡೆ ಎಸ್.ರಾಜು,‘ಕೆ.ಆರ್.ಪುರ ವಿಧಾನ ಸಭಾ ಕ್ಷೇತ್ರದಲ್ಲಿ ಶೇ 95ರಷ್ಟು ಲಸಿಕಾ ಪೂರ್ಣಗೊಳಿಸಿರುವವಾರ್ಡ್ ವಿಜಿನಾಪುರ’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.