ಬೆಂಗಳೂರು: ನಗರದ ಎಂ.ಎಸ್.ರಾಮಯ್ಯ ಎಂಜಿನಿಯರಿಂಗ್ ಕಾಲೇಜಿನಲ್ಲಿ ಸೀಟು ಕೊಡಿಸುವುದಾಗಿ ಹೇಳಿ ಬಿ. ಕಿಶೋರ್ ಎಂಬುವರಿಂದ ₹5.19 ಲಕ್ಷ ಪಡೆದು ವಂಚಿಸಲಾಗಿದೆ.
ಆ ಸಂಬಂಧ ಮಹದೇವಪುರ ಠಾಣೆಗೆ ದೂರು ನೀಡಿರುವ ಕಿಶೋರ್, ‘ತೇಜಸ್ ಹಾಗೂ ಮಂಜುನಾಥ್ ಎಂಬುವರು ಎಂಜಿನಿಯರಿಂಗ್ ಸೀಟು ಕೊಡಿಸುವುದಾಗಿ ಹೇಳಿ ವಂಚಿಸಿದ್ದಾರೆ’ ಎಂದು ದೂರಿದ್ದಾರೆ.
‘ಕಾಲೇಜುಗಳಿಗಾಗಿ ಹುಡುಕಾಟ ನಡೆಸುತ್ತಿದ್ದೆ. ಪರಿಚಯಸ್ಥರೇ ಆದ ತೇಜಸ್, ಮಂಜುನಾಥ್,ರಾಮಯ್ಯ ಕಾಲೇಜಿನಲ್ಲಿ ಸೀಟು ಕೊಡಿಸಲು ₹5.70 ಲಕ್ಷ ಕೇಳಿದ್ದರು. ಇಬ್ಬರ ಖಾತೆಗೂ ಹಣ ಹಾಕಿದ್ದೆ’ ಎಂದು ದೂರಿನಲ್ಲಿ ಕಿಶೋರ್ ಹೇಳಿದ್ದಾರೆ. ‘ಹಣ ಪಡೆದ ನಂತರ ಆರೋಪಿಗಳು, ನನಗೆ ಸೀಟು ಕೊಡಿಸಿಲ್ಲ. ಹಣ ವಾಪಸ್ ಕೇಳಿದ್ದಕ್ಕೆ ₹51 ಸಾವಿರ ಮಾತ್ರ ನೀಡಿದ್ದಾರೆ. ಉಳಿದ ಹಣ ಕೊಡದೇ ವಂಚಿಸಿದ್ದಾರೆ. ಅವರಿಬ್ಬರ ವಿರುದ್ಧ ಕಾನೂನು ಕ್ರಮ ಕೈಗೊಳ್ಳಿ’ ಎಂದು ಒತ್ತಾಯಿಸಿದ್ದಾರೆ. ದೂರು ಪರಿಶೀಲಿಸಲಾಗುತ್ತಿದೆ ಎಂದು ಪೊಲೀಸರು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.