ADVERTISEMENT

‘ಶರಣ ಸಮುದಾಯಕ್ಕೆ ನ್ಯಾಯ ಒದಗಿಸಿ’

ನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಆಗ್ರಹ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2018, 19:47 IST
Last Updated 17 ಡಿಸೆಂಬರ್ 2018, 19:47 IST
ಸಮಾರಂಭದಲ್ಲಿ (ಎಡದಿಂದ) ಮೇಯರ್‌ ಗಂಗಾಂಬಿಕೆ, ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ನ್ಯಾಯಾಮೂರ್ತಿಗಳಾದ ಶಿವರಾಜ ಪಾಟೀಲ, ಎಸ್‌.ಆರ್‌.ಬನ್ನೂರಮಠ, ಸುಭಾಷ್‌ ಬಿ. ಅಡಿ ಭಾಗವಹಿಸಿದ್ದರು
ಸಮಾರಂಭದಲ್ಲಿ (ಎಡದಿಂದ) ಮೇಯರ್‌ ಗಂಗಾಂಬಿಕೆ, ಕಾಡಸಿದ್ದೇಶ್ವರ ಮಠದ ಕರಿವೃಷಭ ದೇಶಿಕೇಂದ್ರ ಶಿವಯೋಗೀಶ್ವರ ಸ್ವಾಮೀಜಿ, ನ್ಯಾಯಾಮೂರ್ತಿಗಳಾದ ಶಿವರಾಜ ಪಾಟೀಲ, ಎಸ್‌.ಆರ್‌.ಬನ್ನೂರಮಠ, ಸುಭಾಷ್‌ ಬಿ. ಅಡಿ ಭಾಗವಹಿಸಿದ್ದರು   

ಬೆಂಗಳೂರು: ‘ಶರಣ ಸಮುದಾಯಕ್ಕೆ ಸಿಗಬೇಕಾದ ಸ್ಥಾನಮಾನಗಳು ಕಾಲಕ್ರಮೇಣ ಸಿಗುತ್ತಿಲ್ಲ. ಸಮುದಾಯಕ್ಕೆ ನ್ಯಾಯ ಒದಗಿಸಬೇಕು’ ಎಂದು ಸುಪ್ರೀಂ ಕೋರ್ಟ್‌ನನಿವೃತ್ತ ನ್ಯಾಯಮೂರ್ತಿ ಶಿವರಾಜ ಪಾಟೀಲ ಆಗ್ರಹಿಸಿದರು.

ನಗರದಲ್ಲಿ ಭಾನುವಾರ ಆಯೋಜಿಸಿದ್ದ ಶರಣ ವಕೀಲರ ವೇದಿಕೆ ಉದ್ಘಾಟನೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ‘ರಾಜಕೀಯದಲ್ಲೂ ಸಮುದಾಯಕ್ಕೆ ಅಷ್ಟೊಂದು ಸ್ಥಾನಮಾನಗಳು ಸಿಕ್ಕಿಲ್ಲ’ ಎಂದು ಬೇಸರ ವ್ಯಕ್ತಪಡಿಸಿದರು.

‌ಹೈಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ಡಿ.ವಿ.ಶೈಲೇಂದ್ರ ಕುಮಾರ್‌, ‘ವೀರಶೈವ ಮತ್ತು ಲಿಂಗಾಯತ ಧರ್ಮ ಎರಡೂ ಬೇರೆ ಬೇರೆ ಎಂಬ ಭಿನ್ನಾಭಿಪ್ರಾಯಗಳನ್ನು ಮೂಡಿಸುತ್ತಿರುವುದು ವಿಪರ್ಯಾಸದ ಸಂಗತಿ. ಇತರರು ನಮಗೆ ಕೆಡಕು ಬಯಸಲು ಬಂದಾಗ ಬಸವಣ್ಣನಂತೆ ತಲೆದೂಗಬಾರದು. ಒಗ್ಗಟ್ಟನ್ನು ಮೆರೆಯಬೇಕು. ವೇದಿಕೆ, ಜಾತಿ, ರಾಜಕಾರಣದ ಗಾಳಿಯನ್ನು ಸೋಕಿಸಿಕೊಳ್ಳದೆ ಸಮುದಾಯದ ಅಭಿವೃದ್ಧಿಗಾಗಿ ಶ್ರಮಿಸಬೇಕು’ ಎಂದು ಹೇಳಿದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.