ಬೆಂಗಳೂರು: ಜಲಮಂಡಳಿಯು ವಿವಿಧ ಉಪವಿಭಾಗಗಳಲ್ಲಿ ಅ.3ರಂದು ನೀರಿನ ಅದಾಲತ್ ನಡೆಸಲಿದೆ.
ನೀರಿನ ಬಿಲ್ಲು, ನೀರು ಮತ್ತು ಒಳಚರಂಡಿ ಸಂಪರ್ಕ ಕಲ್ಪಿಸುವಲ್ಲಿನ ವಿಳಂಬ, ಗೃಹ ಬಳಕೆಯಿಂದ ಗೃಹೇತರ ಬಳಕೆ ಪರಿವರ್ತನೆ ವಿಳಂಬ ಮತ್ತಿತರ ಕುಂದು–ಕೊರತೆಗಳಿಗೆ ಸಂಬಂಧಿಸಿದಂತೆ ಬೆಳಿಗ್ಗೆ 9.30 ರಿಂದ 11ರವರೆಗೆ ಅದಾಲತ್ನಲ್ಲಿ ಅಹವಾಲು ಸಲ್ಲಿಸಬಹುದು
ದಕ್ಷಿಣ1 ಉಪವಿಭಾಗ:ಮೊದಲನೇ ಮಹಡಿ, ದೇವೇಗೌಡ ಪೆಟ್ರೋಲ್ ಬಂಕ್ ಹತ್ತಿರ, ಬನಶಂಕರಿ 3ನೇ ಹಂತ. ದೂರವಾಣಿ ಸಂಖ್ಯೆ –080– 22945198.
ಪಶ್ಚಿಮ-1: ಅರ್ಕಾವತಿ ಭವನ, 5ನೇ ಮುಖ್ಯರಸ್ತೆ, 9ನೇ ಅಡ್ಡರಸ್ತೆ, ಆರ್.ಪಿ.ಸಿ ಲೇಔಟ್, ವಿಜಯನಗರ–23500013.
ಆಗ್ನೇಯ-1: ಸ್ವಾಮಿ ವಿವೇಕಾನಂದ ರಸ್ತೆ, ಲಿಡೋ ಮಾಲ್ ಎದುರು, ಹಲಸೂರು –22945159.
ನೈರುತ್ಯ-1:ದ್ವಾರಕನಾಥ ರಸ್ತೆ, ನ್ಯಾಷನಲ್ ಕಾಲೇಜು ಮುಂಭಾಗ, ವಿ.ವಿ.ಪುರ–22425193.
ಕೇಂದ್ರ-1:ನಂ. 17, ಪಾರ್ಕ್ ರಸ್ತೆ, ತುಳಸಿ ತೋಟ, ಚಿಕ್ಕ ಲಾಲ್ಬಾಗ್–22945188.
ಉತ್ತರ-1:ನಂ.1, ಎಂಇಐ ಲೇಔಟ್, 7ನೇ ಮುಖ್ಯ ರಸ್ತೆ–28371048.
ಪೂರ್ವ-1:1ನೇ ಬ್ಲಾಕ್, ಎಚ್.ಆರ್.ಬಿ.ಆರ್ ಲೇಔಟ್, ಕಲ್ಯಾಣ ನಗರ–22945170.
ವಾಯವ್ಯ-1:ರಾಜಾಜಿನಗರ, 1ನೇ ‘ಎನ್’ ಬ್ಲಾಕ್, 4ನೇ ಅಡ್ಡ ರಸ್ತೆ, ವಿದ್ಯಾವರ್ಧಕ ಶಾಲೆ ಹಿಂಭಾಗ–22945176.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.