ರಾಯಬಾಗ: ತಾಲ್ಲೂಕಿನ ಹಂದಿಗುಂದ ಗ್ರಾಮ ಪಂಚಾಯ್ತಿಯಲ್ಲಿ ನಡೆದಿದೆ ಎನ್ನಲಾದ ಅವ್ಯವಹಾರದ ಬಗ್ಗೆ ಉಪ ಲೋಕಾಯುಕ್ತ ಎಸ್.ವಿ. ಮಜ್ಜಗಿ ಗ್ರಾಮಸ್ಥರ ದೂರಿನನ್ವಯ ಇತ್ತೀಚಿಗೆ ಭೇಟಿ ನೀಡಿ ಪರಿಶೀಲಿಸಿದರು.
ಗ್ರಾಮದ ಹೊಸೂರ ರಸ್ತೆ ಕಾಮಗಾರಿ, ರುದ್ರಭೂಮಿ, ಕಟ್ಟಡ, ಸಂಚಾರಿ ವೈದ್ಯಕೀಯ ಆಸ್ಪತ್ರೆ, ಗ್ರಾಮ ಪಂಚಾಯ್ತಿಯಿಂದ ನಿರ್ಮಿಸಲಾದ ಚರಂಡಿ ಕಾಮಗಾರಿಗಳನ್ನು ವೀಕ್ಷಿಸಿದರು. ಗ್ರಾಮದ ಮನೆಗಳ ಮುಂದೆ ನಿಂತ ಕೊಳಚೆ ನೀರು ಗಬ್ಬು ನಾರುತ್ತಿರುವುದನ್ನು ಗಮನಸಿದ ಅವರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಬಸವರಾಜ ದೇವರವರ ಹಾಗೂ ಪಿ.ಡಿ.ಒ ಬಿ.ವಿ. ಮಸಾಲಜಿ ಅವರನ್ನು ತರಾಟೆಗೆ ತೆಗೆದುಕೊಂಡರು. ಕೂಡಲೇ ಫಾಗಿಂಗ್ ಮಾಡುವಂತೆ ಸೂಚಿಸಿದರು.
ಜಿಲ್ಲಾ ಲೋಕಾಯುಕ್ತ ಜಿ.ಆರ್. ಪಾಟೀಲ, ಬಿ.ಎಸ್. ಪಾಟೀಲ, ತಾ.ಪಂ. ಅಧಿಕಾರಿ ವೀರಣ್ಣ ವಾಲಿ, ಗೌಡಪ್ಪ ಪಾಟೀಲ, ಹನಮಂತ ನಾವಿ, ಸದಾಶಿವ ಬುರ್ಜಿ ಮತ್ತಿತರರು ಉಪಸ್ಥಿತರಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.