ADVERTISEMENT

ರೂಪ ಸಂಪತ್ತಿಗಿಂತ ಭಾವ ಸಂಪತ್ತು ಶ್ರೇಷ್ಠ

​ಪ್ರಜಾವಾಣಿ ವಾರ್ತೆ
Published 29 ಡಿಸೆಂಬರ್ 2017, 8:34 IST
Last Updated 29 ಡಿಸೆಂಬರ್ 2017, 8:34 IST

ರೂಪ ಸಂಪತ್ತಿಗಿಂತ ಭಾವ ಸಂಪತ್ತು ಶ್ರೇಷ್ಠ. ನಮಗೆ ದೊರೆತ ಮಹತ್ತರವಾದ ಸಂಪತ್ತು ಎಂದರೆ ದೇಹ, ಬುದ್ದಿ ಮತ್ತು ಭಾವಗಳು. ಇವೆ. ದೇವರು ಕರುಣಿಸಿದ ಅಪ್ರತಿಮ ಕಾಣಿಕೆ. ಭಾವ ಸೌಂದರ್ಯದ ಮೇಲೆ ಜೀವನ ಅವಲಂಬಿಸಿದೆ. ಭಾವ ವಿಶಾಲವಾದರೇ ಬದುಕು ವಿಶಾಲ, ಸಂಕುಚಿತವಾದರೆ ಜೀವನವೂ ಸಂಕುಚಿತ. ಸುಖ, ದುಃಖ, ಬಂಧನ, ಮುಕ್ತಿ ಎಲ್ಲವೂ ಭಾವವನ್ನೇ ಅವಲಂಬಿಸಿವೆ.

ಕೇವಲ ಶರೀರದಿಂದ ಎಲ್ಲವೂ ಸಾಧ್ಯವಿಲ್ಲ. ಈ ಭಾವದಲ್ಲಿ ಮೂರು ಪ್ರಕಾರಗಳಿವೆ. ನಾನು ಅನುಭವಿಸುತ್ತಿದ್ದೇನೆ ಎಂಬುದು ಭೋಕ್ತಭಾವ. ನಾನು ಮಾಡುತ್ತಿದ್ದೇನೆ ಎಂಬುದು ಕರ್ತವ್ಯ ಭಾವ ಮತ್ತು ನಾನು ತಿಳಿಯುತ್ತಿದ್ದೇನೆ ಎಂಬುದು ಜ್ಞಾತೃತ್ವ ಭಾವ.

ಈ ಮೂರರಲ್ಲಿ ‘ನಾನು’ ಎಂಬುದು ಮುಖ್ಯವಾದದ್ದು. ಈ ಭಾವಗಳು ನಮ್ಮ ಸಂತೋಷ ಹಾಗೂ ದುಃಖಕ್ಕೆ ಕಾರಣವಾಗುತ್ತವೆ. ಗಾಳಿಪಟ ಎತ್ತರೆತ್ತರಕ್ಕೇರಲು ಹಾರಲು ಸೂತ್ರ ಮತ್ತು ಬಾಲವೇ ಕಾರಣ. ಸೂತ್ರ ಹರಿದರೆ ನಾನು ಮತ್ತು ನನ್ನದು ಎಂಬ ಭಾವ ಬೇಕು. ಆದರೆ, ಆ ಭಾವ ಸಾತ್ವಿಕವಾಗಿರಬೇಕು ಹೊರತು ತಾಮಸವಾಗಬಾರದು. ಇಡೀ ಜಗತ್ತನ್ನು ಗೆದ್ದು, ಸಾಮ್ರಾಟವಾಗಬೇಕು ನಿಮಿತ್ತ ಅಲೆಕ್ಸಾಂಡರ್ ಕನಸು ಕಂಡ. ಎಷ್ಟೇ ದೊಡ್ಡವ ಎಂದು ಭಾವಿಸಿದವನಿಗೂ ಆ ಅಹಂ ಬಿಟ್ಟಿಲ್ಲ. ಲೌಕಿಕ ಮಾತ್ರವಲ್ಲ ಪಾರಮಾರ್ಥಿಕ ಜಗತ್ತಿನಲ್ಲಿಯೂ ಇದು ಕಾಡುತ್ತದೆ. ವ್ಯತ್ಯಾಸವೆಂದರೆ ಮಹಾತ್ಮರಲ್ಲಿ ಎಲ್ಲರೂ ನನ್ನವರೆಂಬ ಉದಾತ್ತತೆ ಇದ್ದರೆ.

ADVERTISEMENT

ಸಾಮಾನ್ಯರಲ್ಲಿ ಇದು ಮಾತ್ರ ನನ್ನದು, ಇವರು ಮಾತ್ರ ನನ್ನವರು ಎನ್ನುವ ಸಣ್ಣತನ ಮೂಡುತ್ತದೆ. ಭಾರತ ರತ್ನದಂಥ ಪ್ರಶಸ್ತಿಯನ್ನು ಸರ್ಕಾರಗಳು ಕೊಡಬಹುದು. ಆದರೇ, ಮಹಾತ್ಮ ಎಂಬ ಬಿರುದನ್ನು ಯಾರಿಗೆ ಯಾರು ಕೊಡಲು ಸಾಧ್ಯ ? ಮಹರ್ಷಿ ಅರವಿಂದರ ಪ್ರಕಾರ ಮನೋವಿಕಾಸವೆ ಜೀವನದ ಅತಿದೊಡ್ಡ ಸಾಧನ. ಮನುಷ್ಯ ಮಹಾದೇವನಾಗುವ ದಿವ್ಯತೆಯೇ ಭಾವ ವಿಕಾಸ.

ವ್ಯಕ್ತಿಯಿಂದ ವ್ಯಕ್ತಿಗೆ ಬುದ್ದಿ ಹೆಚ್ಚು, ಕಡಿಮೆ ಇರಬಹುದು. ಆದರೆ ಭಾವ ಎಲ್ಲರಲ್ಲಿ ಸಮವಾಗಿರುತ್ತದೆ. ಮದುವೆಯಲ್ಲಿ ಕಟ್ಟಿದ ಅರವಿ ಗಂಟು ಬಿಚ್ಚಬಹುದು. ಆದರೇ ಭಾವ ಗಂಟು ಬಿಡುವುದಿಲ್ಲ. ನೂರು ವರ್ಷಗಳ ಸಂಬಂಧವನ್ನು ಅದು ಬೆಸೆಯುತ್ತದೆ. ಪಾಶ್ಚಿಮಾತ್ಯರ ಮದುವೆ ವ್ಯವಹಾರದ ಬಂಧನ. ಭಾರತೀಯರದು ಭಾವ ವಿವಾಹ. ವನವಾಸದ ಕಷ್ಟ ರಾಮನಿಗೆ ಇದ್ದರೂ ಅದನ್ನು ಸೀತಾ ದೇವಿಯೂ ಅನುಭವಿಸಿದಳು. ನೀನಿಲ್ಲದ ಅರಮನೆ ನನಗೆ ವನವಾಸ, ನೀನಿರುವ ಕಾಡೇ ನನಗೆ ಅಯೋಧ್ಯೆ ಅಂದಳು ಜಾನಕಿ. ಈ ಭಾವವೇ ಬದುಕಿನ ಮೂಲ ದ್ರವ್ಯವಾಗಬೇಕು. ಯೌವನ, ರೂಪ ಹಾಗೂ ಸಂಪತ್ತಿಗಿಂತ ಭಾವ ಸಂಪತ್ತು ಶ್ರೇಷ್ಠ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.