ADVERTISEMENT

`ವೀರಶೈವ ಸಮಾಜದ ಏಳಿಗೆಗೆ ಬದ್ಧ'

​ಪ್ರಜಾವಾಣಿ ವಾರ್ತೆ
Published 6 ಫೆಬ್ರುವರಿ 2013, 9:45 IST
Last Updated 6 ಫೆಬ್ರುವರಿ 2013, 9:45 IST
ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ, ಶಾಸಕ ಈಶ್ವರ ಖಂಡ್ರೆ ಅವರಿಗೆ ಈಚೆಗೆ ಸತ್ಕರಿಸಲಾಯಿತು. ಭಾತಂಬ್ರಾ-ಕೊಡಂಬಲ್ ಜಗದ್ಗುರು ಶಿವಯೋಗಿಶ್ವರ ಸ್ವಾಮೀಜಿ, ಸಿದ್ರಾಮಪ್ಪ ಮುದ್ದಾ, ಭೊರಾಳೆ ವಕೀಲರು ಇದ್ದರು
ಭಾಲ್ಕಿ ತಾಲೂಕಿನ ಭಾತಂಬ್ರಾದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ, ಶಾಸಕ ಈಶ್ವರ ಖಂಡ್ರೆ ಅವರಿಗೆ ಈಚೆಗೆ ಸತ್ಕರಿಸಲಾಯಿತು. ಭಾತಂಬ್ರಾ-ಕೊಡಂಬಲ್ ಜಗದ್ಗುರು ಶಿವಯೋಗಿಶ್ವರ ಸ್ವಾಮೀಜಿ, ಸಿದ್ರಾಮಪ್ಪ ಮುದ್ದಾ, ಭೊರಾಳೆ ವಕೀಲರು ಇದ್ದರು   

ಭಾಲ್ಕಿ: ಎಲ್ಲರನ್ನೂ ಇವ ನಮ್ಮವನೆಂದು ಅಪ್ಪಿಕೊಳ್ಳುವ ವೀರಶೈವ ಸಮಾಜದ ಸರ್ವತೋಮುಖ ಅಭಿವೃದ್ಧಿಗಾಗಿ ಶ್ರಮಿಸುತ್ತೇನೆಂದು ಶಾಸಕ ಈಶ್ವರ ಖಂಡ್ರೆ ನುಡಿದರು.

ಭಾಲ್ಕಿ ತಾಲ್ಲೂಕಿನ ಭಾತಂಬ್ರಾದಲ್ಲಿ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಅಖಿಲ ಭಾರತ ವೀರಶೈವ ಮಹಾಸಭೆಯ ಮಹಾ ಪ್ರಧಾನ ಕಾರ್ಯದರ್ಶಿ ಯಾಗಿರುವ ಪ್ರಯುಕ್ತ ಹಮ್ಮಿಕೊಂಡ ಅಭಿನಂದನಾ ಸಮಾರಂಭದಲ್ಲಿ ಮಾತನಾಡಿದರು. ಯುವಕರು ಜವಾಬ್ದಾರಿಯಿಂದ ವರ್ತಿಸುವ ಮೂಲಕ ಸಮಾಜಕ್ಕೆ ಸೇವೆ ಸಲ್ಲಿಸಬೇಕು ಎಂದು ತಿಳಿಸಿದರು.

ಭಾತಂಬ್ರಾ-ಕೊಡಂಬಲ್ ಜಗದ್ಗುರು ಶಿವ ಯೋಗಿಶ್ವರ ಸ್ವಾಮೀಜಿ ಸಾನಿಧ್ಯ ವಹಿಸಿದ್ದರು.

ADVERTISEMENT

ಸಿದ್ರಾಮಪ್ಪ ಮುದ್ದಾ, ಕಂಟೆಪ್ಪ ದಾಡಗೆ, ವೆಂಕಟರಾವ ಭೊರಾಳೆ ವಕೀಲ, ಶಿವಾನಂದ ದಾಡಗೆ, ಶಂಕರ ಭೊರಾಳೆ, ಚನ್ನಬಸವ ಟೋಕರೆ, ಚಂದ್ರಕಾಂತ ಬೀಗೆ, ಸುಭಾಷ ಭೊರಾಳೆ, ಕಾಶಿನಾಥ ಧಬಾಲೆ, ರವಿ ಗಾಮಾ, ಧನರಾಜ ಪಾಟೀಲ, ಸತೀಶ ಧರ್ಮಣ್ಣಾ, ಓಂಕಾರ, ಸತೀಶ ಬಿರಾದಾರ, ಗುರುನಾಥ ಲದ್ದೆ, ಮಾಧವರಾವ ಗುಬ್ಬೆ, ಕಾಶಿನಾಥ ಲದ್ದೆ, ಮಹಾದೇವ ಸ್ವಾಮಿ ಮುಂತಾದವರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.