ADVERTISEMENT

ಪೂಜೆಯ ವಿವಾದ: ‍ಅರ್ಚಕನ ಕೊಲೆ

​ಪ್ರಜಾವಾಣಿ ವಾರ್ತೆ
Published 11 ಜೂನ್ 2019, 16:06 IST
Last Updated 11 ಜೂನ್ 2019, 16:06 IST
ರಮೇಶ ಸ್ವಾಮಿ
ರಮೇಶ ಸ್ವಾಮಿ   

ಬೀದರ್‌: ಇಲ್ಲಿಯ ಪಾಪನಾಶ ಮಂದಿರದ ಅರ್ಚಕ ಶಿವನಗರದ ರಮೇಶ ಸ್ವಾಮಿ (32) ಅವರನ್ನು ಮಂದಿರಸಮೀಪದ ಕಲ್ಯಾಣ ಮಂಟಪದಲ್ಲಿ ಮಂಗಳವಾರ ಬೆಳಗಿನ ಜಾವ ಕೊಲೆ ಮಾಡಲಾಗಿದೆ.

‘ಪಾಪನಾಶ ದೇವಸ್ಥಾನದ ಪೂಜೆಯ ಜವಾಬ್ದಾರಿಯನ್ನುಬಿಟ್ಟುಕೊಡುವ ವಿಷಯವಾಗಿ ರೇವಣಸಿದ್ದಯ್ಯ ಸ್ವಾಮಿ ಸೇರಿದಂತೆ ನಾಲ್ವರು ಕಬ್ಬಿಣದ ಸಲಾಕೆಯಿಂದ ಬಲವಾಗಿ ಹೊಡೆದು ಕೊಲೆ ಮಾಡಿದ್ದಾರೆ’ ಎಂದು ರಮೇಶ ಸ್ವಾಮಿ ಪತ್ನಿ ರೇಣುಕಾ ಸ್ವಾಮಿ ನ್ಯೂಟೌನ್‌ ಪೊಲೀಸರಿಗೆ ದೂರು ನೀಡಿದ್ದಾರೆ.

ಪಾಪನಾಶ ಮಂದಿರದ ಪೂಜಾರಿಕೆಯ ವಿಷಯವಾಗಿ ಮೊದಲಿನಿಂದಲೂ ಇಬ್ಬರು ಸಹೋದರರ ಮಧ್ಯೆ ವಿವಾದ ಇತ್ತು. ಇಬ್ಬರು ಸಹೋದರರ ಪೈಕಿ ಒಬ್ಬರು ಹಿಂದೆಯೇ ಮೃತಪಟ್ಟಿದ್ದಾರೆ. ಪೂಜಾರಿಕೆಯನ್ನು ಉಳಿಸಿಕೊಳ್ಳಲು ಮೃತ ವ್ಯಕ್ತಿಯ ಪತ್ನಿ ತನ್ನ ಸಹೋದರ ರಮೇಶ ಸ್ವಾಮಿಯ ನೆರವು ಪಡೆದುಕೊಂಡಿದ್ದರು.

ADVERTISEMENT

‘ರಮೇಶ ಸ್ವಾಮಿ ಯಾವಾಗಲೂ ಅಕ್ಕನ ರಕ್ಷಣೆಗೆ ಇರುತ್ತಿದ್ದ. ದೇವರ ಪೂಜೆಯನ್ನೂ ಮಾಡುತ್ತಿದ್ದರು. ಇದು ರಮೇಶ ಸ್ವಾಮಿ ಅಕ್ಕನ ಮೈದುನ ಕುಟುಂಬದವರಿಗೆ ತಲೆನೋವು ಆಗಿತ್ತು. ಈ ಕಾರಣಕ್ಕಾಗಿಯೇ ಕೊಲೆ ಮಾಡಿರುವ ಶಂಕೆ ಇದೆ. ಸಾಕ್ಷ್ಯಾಧಾರಗಳನ್ನು ಸಂಗ್ರಹಿಸಿ ತನಿಖೆ ಮುಂದುವರಿಸಲಾಗಿದೆ’ ಎಂದು ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಟಿ.ಶ್ರೀಧರ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.