ADVERTISEMENT

ಕೇಂದ್ರ ಸಚಿವ ಖೂಬಾ ಅವರಿಂದಲೇ ನನ್ನ ಸೋಲಿಸುವ ಯತ್ನ: ಕಣ್ಣೀರಿಟ್ಟ ಪ್ರಭು ಚವಾಣ್

ಮಾಧ್ಯಮದೆದರು ಕಣ್ಣೀರಿಟ್ಟ ಚವಾಣ್

​ಪ್ರಜಾವಾಣಿ ವಾರ್ತೆ
Published 13 ಮೇ 2023, 16:26 IST
Last Updated 13 ಮೇ 2023, 16:26 IST
ಕಣ್ಣೀರಿಟ್ಟ ಪ್ರಭು ಚವಾಣ್
ಕಣ್ಣೀರಿಟ್ಟ ಪ್ರಭು ಚವಾಣ್   

ಬೀದರ್‌: ‘ಕೇಂದ್ರ ಸಚಿವ ಭಗವಂತ ಖೂಬಾ ಅವರು ನನ್ನ ಸೋಲಿಸಲು ಶತಾಯ ಗತಾಯ ಪ್ರತ್ನಿಸಿದರು. ಪಕ್ಷ ತಾಯಿ ಇದ್ದ ಹಾಗೆ, ಖೂಬಾ ತಾಯಿಗೆ ದ್ರೋಹ ಮಾಡಿದರು. ಆದರೆ, ಔರಾದ್‌ ಜನ ನನ್ನ ಕೈಬಿಡಲಿಲ್ಲ’ ಎಂದು ಔರಾದ್‌ನಿಂದ ನಾಲ್ಕನೇ ಬಾರಿ ಆಯ್ಕೆಯಾದ ಪ್ರಭು ಚವಾಣ್ ಹೇಳಿದರು.

ಫಲಿತಾಂಶ ಘೋಷಣೆ ನಂತರ ಪ್ರತಿಕ್ರಿಯೆ ನೀಡಿದ ಅವರು,‘ನಾನೇನು ಅವರಿಗೆ ಅನ್ಯಾಯ ಮಾಡಿದೆ ಎಂದು ಅವರು ನನ್ನನ್ನು ಸೋಲಿಸಲು ಪ್ರಯತ್ನಿಸಿದರು. ಕೆಲವರಿಗೆ ಪಕ್ಷದಿಂದ ರಾಜೀನಾಮೆ ಕೊಡಿಸಿ ನನ್ನ ಸೋಲಿಗೆ ಏನೆಲ್ಲ ಪ್ರಯತ್ನ ಮಾಡಿದರು. ಇದು ಕೇಂದ್ರ ಸಚಿವರು ಮಾಡುವ ಕೆಲಸವೇ? ಕಾರ್ಯಕರ್ತರಿಗೆ ಮೊಬೈಲ್‌ ಫೋನ್‌ ಮೂಲಕ ಕರೆ ಮಾಡಿ ಪ್ರಭು ಚವಾಣ್‌ಗೆ ಬೆಂಬಲಿಸಬೇಡಿ ಎಂದು ಒತ್ತಡ ಹಾಕಿದ್ದರು’ ಎಂದು ಆರೋಪಿಸಿದರು.

‘ನಾನು ಲೋಕಸಭಾ ಚುನಾವಣೆಯಲ್ಲಿ ಅವರಿಗಾಗಿ ಕೆಲಸ ಮಾಡಿದ್ದೇನೆ. ಆಳಂದ, ಚಿಂಚೋಳಿ ಸೇರಿ ಎಲ್ಲ ಕಡೆ ಅವರ ಪರವಾಗಿ ಓಡಾಡಿ ಅವರ ಗೆಲುವಿಗೆ ಶ್ರಮಿಸಿದ್ದೆ. ಆದರೆ ಅವರು ನನ್ನನ್ನು ಸೋಲಿಸಲು ಯತ್ನಿಸಿದ್ದು ಸರಿಯೇ’ ಎಂದು ಕಣ್ಣೀರು ಹಾಕಿ ‘ಮುಂದೆ ಅವರಿಗೆ ದೇವರೇ ನೋಡಿಕೊಳ್ಳಲಿದ್ದಾನೆ’ ಎಂದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.