ADVERTISEMENT

ವಿದ್ಯೆಯೊಡನೆ ಬುದ್ಧಿಯೂ ಇರಬೇಕು

​ಪ್ರಜಾವಾಣಿ ವಾರ್ತೆ
Published 24 ಫೆಬ್ರುವರಿ 2018, 7:09 IST
Last Updated 24 ಫೆಬ್ರುವರಿ 2018, 7:09 IST

ಕೊಳ್ಳೇಗಾಲ: ವಿದ್ಯಾರ್ಥಿ ಜೀವನದಲ್ಲಿ ಶಿಕ್ಷಣ, ಸಂಸ್ಕಾರ, ಪ್ರತಿಭೆ ಜೀವನಕ್ಕೆ ಬೇಕಾದ ಪ್ರಮುಖ ಅಂಶಗಳು ಎಂದು ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶ ಡಿ.ವಿನಯ್ ಹೇಳಿದರು.

ನಗರದ ಜೆಎಸ್‌ಎಸ್ ಮಹಿಳಾ ಕಾಲೇಜಿನಲ್ಲಿ ರಾಜ್ಯಶಾಸ್ತ್ರ ವಿಭಾಗವು ಶುಕ್ರವಾರ ಹಮ್ಮಿಕೊಂಡಿದ್ದ ಅಣಕು ನ್ಯಾಯಾಲಯ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶಿಕ್ಷಣ ಎಂದರೆ ಪದವಿ ಮಾತ್ರವಲ್ಲ, ವಿದ್ಯೆಯೊಡನೆ ಬುದ್ಧಿಯೂ ಇರಬೇಕು ಜೊತೆಗೆ, ಪ್ರತಿಭೆಯೂ ಇರಬೇಕು. ಇವೆಲ್ಲವನ್ನು ಸೇರಿಸಿಕೊಂಡು ಬೆಳೆಯುವುದು ವಿದ್ಯಾರ್ಥಿಗಳ ದೊಡ್ಡ ಗುಣ ಎಂದು ಹೇಳಿದರು. ಕಾರ್ಯಕ್ರಮದಲ್ಲಿ ಹಿರಿಯ ಶ್ರೇಣಿ ಸಿವಿಲ್ ನ್ಯಾಯಾಧೀಶ ಎಸ್.ಜೆ. ಕೃಷ್ಣ, ವಕೀಲರಾದ ರಾಧಾಕೃಷ್ಣ, ನಾಗೇಶ, ಬಸವರಾಜು, ಪ್ರೊ. ಉಮೇಶ ಇದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.