ಗುಂಡ್ಲುಪೇಟೆ: ತಾಲ್ಲೂಕಿನ ಮೂಖಹಳ್ಳಿಯ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಕ್ಕೆ ತೆಂಕಲಹುಂಡಿ ಗ್ರಾಮದ ಕರಿಬಸವೇಗೌಡ ಅಧ್ಯಕ್ಷರಾಗಿ, ಹೊನ್ನಶೆಟ್ಟರ ಹುಂಡಿ ಗ್ರಾಮದ ಪುಟ್ಟಣ್ಣಗೌಡರು ಉಪಾಧ್ಯಕ್ಷರಾಗಿ ಆಯ್ಕೆಯಾದರು.
ಹೊನ್ನಶೆಟ್ಟರ ಹುಂಡಿ ವಿ.ಶ್ರೀನಿವಾಸ ಶೆಟ್ಟಿ, ಚೆಲುವಯ್ಯ ಮತ್ತು ಶಾಂತಮ್ಮ, ತೆಂಕಲಹುಂಡಿ ನಾಗೇಶ, ಬಿ.ರಮೇಶ, ದೊಡ್ಡೇಗೌಡ ಹಾಗೂ ಮೂಖಹಳ್ಳಿಯ ಮಹದೇವಪ್ಪ, ನಾಗಮ್ಮ, ವೆಂಕಟಯ್ಯ ಮತ್ತು ಮಹದೇವ ನಿರ್ದೇಶಕರಾಗಿ ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಜಾತಿ ಸಮೀಕರಣ ಮತ್ತು ಅಧಿಕಾರ ಹಂಚಿಕೆ ಸರಿಯಾದ ರೀತಿಯಲ್ಲಿ ರೂಪಿಸಿದ ಮುಖಂಡ ಗೌಡ್ರಟ್ಟಿ ಸಿದ್ದೇಶ್, ಮಹೇಶ್, ಮಹದೇವೇಗೌಡ, ಶಿವಣ್ಣ, ಪ್ರವೀಣ್ ಕುಮಾರ್ ಮತ್ತು ಸತೀಶ ಆಡಳಿತ ಮಂಡಳಿಯು ಅವಿರೋಧವಾಗಿ ಆಯ್ಕೆಯಾಗಲು ಶ್ರಮಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.