ಯಳಂದೂರು: ತಾಲ್ಲೂಕಿನ ಹೊನ್ನೂರು ಗ್ರಾಮದಲ್ಲಿ ಶುಕ್ರವಾರ ಗ್ರಾಮ ಪಂಚಾಯತಿ ಅಧ್ಯಕ್ಷರಾಗಿ ಎಚ್.ಎಂ. ಗುರುಪ್ರಸಾದ್ ಹಾಗೂ ಉಪಾಧ್ಯಕ್ಷರಾಗಿ ನೇತ್ರಾವತಿ ಅವಿರೋಧವಾಗಿ ಆಯ್ಕೆಯಾದರು.
ಹಿಂದಿನ ಅಧ್ಯಕ್ಷರಾಗಿದ್ದ ಆರ್.ಪುಟ್ಟಬಸವಯ್ಯ ಹಾಗೂ ಉಪಾಧ್ಯಕ್ಷೆ ಭಾಗ್ಯಮ್ಮ ರಾಜಿನಾಮೆ ನೀಡಿದ್ದರಿಂದ ತೆರವಾದ ಸ್ಥಾನಕ್ಕೆ ಚುನಾವಣೆ ನಿಗಧಿಯಾಗಿತ್ತು.
ಕ್ಷೇತ್ರ ಶಿಕ್ಷಣಾಧಿಕಾರಿ ಮಾರಯ್ಯ ಚುನಾವಣಾಧಿಕಾರಿಯಾಗಿ ಭಾಗವಹಿಸಿದ್ದರು. ಸದಸ್ಯರಾದ ಪುಟ್ಟಬಸವಯ್ಯ, ಭಾಗ್ಯಮ್ಮ, ಇಂದಿರಾ, ಕೆ.ಚಿನ್ನಸ್ವಾಮಿ, ಶಂಕರ್ ರೂಪೇಶ್, ಶಿವಪ್ರಕಾಶ್, ನಾಗರತ್ನಮ್ಮ, ಅನಿತಾ ನಿರಂಜನ್, ರಾಜೇಶ್, ಜಯಮ್ಮ, ಜಿ.ನಾಗರಾಜು, ರಾಧಾ, ಕುಮಾರ್, ಮುಖಂಡರಾದ ರೇವಣ್ಣ, ನಿರಂಜನ್, ರಾಜಶೇಖರ್, ಪ್ರಕಾಶ್, ಸುರೇಶ್,
ಪಿಡಿಒ ನಿರಂಜನ್ ಕುಮಾರ್, ಕಾರ್ಯದರ್ಶಿ ಲಕ್ಷ್ಮಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.