ADVERTISEMENT

ತಾಲ್ಲೂಕು ಕ್ರೀಡಾಕೂಟ: ಸರ್ಕಾರಿ ಶಾಲೆಗಳ ಮೇಲುಗೈ

​ಪ್ರಜಾವಾಣಿ ವಾರ್ತೆ
Published 13 ಸೆಪ್ಟೆಂಬರ್ 2011, 9:30 IST
Last Updated 13 ಸೆಪ್ಟೆಂಬರ್ 2011, 9:30 IST

ಶಿಡ್ಲಘಟ್ಟ: ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ನಡೆದ ಹಿರಿಯ ಪ್ರಾಥಮಿಕ ಹಾಗೂ ಪ್ರೌಢಶಾಲೆಗಳ ಕ್ರೀಡಾಕೂಟದ ಫಲಿತಾಂಶ.

ಹಿರಿಯ ಪ್ರಾಥಮಿಕ ಶಾಲಾ ವಿಭಾಗ:
200 ಮೀಟರ್ ಓಟ: ಪ್ರಥಮ: ಯೋಗಾನಂದ (ನವೋ ದಯ, ನಡಿಪಿನಾಯಕನಹಳ್ಳಿ), ನಂದಿನಿ (ಶಾಲವಿ, ಸಾದಲಿ)

ದ್ವಿತೀಯ: ಲೋಕೇಶ್ (ಎಸ್.ವಿ.ಎಚ್.ಪಿ.ಎಸ್, ಮಳ್ಳೂರು), ಮಂಜುಶ್ರೀ (ಸುಮುಖ, ಎಚ್.ಕ್ರಾಸ್)
400 ಮೀಟರ್ ಓಟ: ಪ್ರಥಮ: ವೇಣುಗೋಪಾಲರೆಡ್ಡಿ (ಎಸ್.ಎಂ.ಇ. ದಿಬ್ಬೂರಹಳ್ಳಿ), ಮಂಜುಶ್ರೀ (ಸುಮುಖ, ಎಚ್.ಕ್ರಾಸ್) ದ್ವಿತೀಯ: ನವೀನ್ (ಶಾರದಾ, ಶಿಡ್ಲಘಟ್ಟ), ದೀಪಿಕಾ (ಹಿ.ಪ್ರಾ.ಶಾಲೆ, ವರದನಾಯಕನಹಳ್ಳಿ)

600 ಮೀಟರ್ ಓಟ: ಪ್ರಥಮ: ನವೀನ್ ಬಾಬು (ಹಿ.ಪ್ರಾ.ಶಾಲೆ, ತುಮ್ಮನಹಳ್ಳಿ), ನಿಶ್ಚಿತ (ಸುಮುಖ, ಎಚ್. ಕ್ರಾಸ್) ದ್ವಿತೀಯ: ಮೌಲಾಲಿ (ಪ್ಯಾರೇಗಾನ್, ಶಿಡ್ಲಘಟ್ಟ), ಮೀನಾ (ಹಿ.ಪ್ರಾ.ಶಾಲೆ, ವರದನಾಯಕನಹಳ್ಳಿ)
ಉದ್ದ ಜಿಗಿತ: ಪ್ರಥಮ: ವೇಣುಗೋಪಾಲರೆಡ್ಡಿ (ಎಸ್.ಎಂ.ಇ. ದಿಬ್ಬೂರಹಳ್ಳಿ), ಆಶಾ.ಸಿ.ಎಂ (ಸಿ.ಎಂ.ಇ. ದಿಬ್ಬೂರಹಳ್ಳಿ) ದ್ವಿತೀಯ: ನರೇಂದ್ರ (ಎಸ್.ಎಸ್.ಎಚ್.ಪಿ.ಎಸ್, ಶಿಡ್ಲಘಟ್ಟ), ನಾಗಮಣಿ.ಜಿ.ಎಲ್ (ಹಿ.ಪ್ರಾ.ಶಾಲೆ, ಗಾಂಡ್ಲಚಿಂತೆ)

ಎತ್ತರ ಜಿಗಿತ: ಪ್ರಥಮ ಡಿ.ಎಸ್.ಸಂಜಯ್ (ಎಸ್.ಎಂ.ಇ. ದಿಬ್ಬೂರಹಳ್ಳಿ), ಆಶಾ.ಸಿ.ಎಂ (ಸಿ.ಎಂ.ಇ. ದಿಬ್ಬೂರಹಳ್ಳಿ) ದ್ವಿತೀಯ: ಮಹೇಶ್ (ಕುವೆಂಪು ಮಾದರಿ ಹಿ.ಪ್ರಾ.ಶಾಲೆ, ಚೀಮಂಗಲ), ಅರ್ಚನ (ಹಿ.ಪ್ರಾ.ಶಾಲೆ, ಪಲಿಚೆರ್ಲು)

ಗುಂಡುಸೆತ: ಪ್ರಥಮ: ಎಂ.ಮುನಿಕೃಷ್ಣಪ್ಪ (ವಾಸವಿ, ಶಿಡ್ಲಘಟ್ಟ), ಟಿ.ಆರ್.ಲಾವಣ್ಯ (ನವೋದಯ, ನಡಿಪಿನಾ ಯಕನಹಳ್ಳಿ) ದ್ವಿತೀಯ: ಭಾನುಪ್ರಕಾಶ್ (ಜಂಗಮಕೋಟೆ), ಜೆ.ಎನ್.ಅರುಣಾ (ಹಿ.ಪ್ರಾ.ಶಾಲೆ, ಜಂಗಮಕೋಟೆ)

ಚಕ್ರ ಎಸೆತ: ಪ್ರಥಮ: ಎಂ.ಮುನಿಕೃಷ್ಣಪ್ಪ (ವಾಸವಿ, ಶಿಡ್ಲಘಟ್ಟ), ಜೆ.ಎನ್.ಅರುಣಾ (ಹಿ.ಪ್ರಾ.ಶಾಲೆ, ಜಂಗಮ ಕೋಟೆ) ದ್ವಿತೀಯ: ಭಾನುಪ್ರಕಾಶ್ (ಜಂಗಮಕೋಟೆ), ರೂಪಾ (ಹಿ.ಪ್ರಾ.ಶಾಲೆ, ರಾಮೇಶ್ವರ)
ಪ್ರೌಢಶಾಲಾ ವಿಭಾಗ; 200 ಮೀಟರ್ ಓಟ:  ಪ್ರಥಮ: ಅಶ್ವಿನ್ (ವಾಸವಿ, ಶಿಡ್ಲಘಟ್ಟ), ಕೆ.ಎನ್.ದೀಪಾ (ಹಿ. ಪ್ರಾ. ಶಾಲೆ, ತುಮ್ಮನಹಳ್ಳಿ) ದ್ವಿತೀಯ: ಸುಬ್ರಮಣಿ (ಸುಮುಖ, ಎಚ್.ಕ್ರಾಸ್), ಮಾನಸಾ (ನವೋದಯ, ನಡಿಪಿನಾಯಕನ ಹಳ್ಳಿ)

 400 ಮೀಟರ್ ಓಟ: ಪ್ರಥಮ: ಶಭಾಷ್ ಪಾಷ (ಎಸ್.ವಿ.ಎ.ಆರ್. ಶಿಡ್ಲಘಟ್ಟ), ಕೆ.ಎನ್.ದೀಪಾ                (ಹಿ.ಪ್ರಾ.ಶಾಲೆ, ತುಮ್ಮನಹಳ್ಳಿ)  ದ್ವಿತೀಯ: ಸುಬ್ರಮಣಿ (ಸುಮುಖ, ಎಚ್. ಕ್ರಾಸ್), ಮೌನಿಕಾ (ಸುಮುಖ, ಎಚ್.ಕ್ರಾಸ್),

800 ಮೀಟರ್ ಓಟ: ಪ್ರಥಮ: ಶಭಾಷ್ ಪಾಷ (ಎಸ್. ವಿ.ಎ.ಆರ್. ಶಿಡ್ಲಘಟ್ಟ), ಶಶಿಕಲಾ (ಹಿ.ಪ್ರಾ.ಶಾಲೆ, ತುಮ್ಮನ ಹಳ್ಳಿ) ದ್ವಿತೀಯ: ಗಿರೀಶ್ (ಸುಮುಖ, ಎಚ್.ಕ್ರಾಸ್), ಸುಶ್ಮಿತಾ (ಸುಮುಖ, ಎಚ್.ಕ್ರಾಸ್)
1500 ಮೀಟರ್ ಓಟ: ಪ್ರಥಮ: ಮೂರ್ತಿ (ಜಿ.ಎಚ್. ಎಸ್. ಜಂಗಮಕೋಟೆ), ಅರ್ಪಿತಾ (ಸುಮುಖ, ಎಚ್.ಕ್ರಾಸ್) ದ್ವಿತೀಯ: ಸಿ.ಎನ್.ಹರೀಶ (ಜಿ.ಎಚ್.ಎಸ್. ಕುಂದಲ ಗುರ್ಕಿ), ಲಾವಣ್ಯ (ಜಿ.ಎಚ್.ಎಸ್. ತುಮ್ಮನಹಳ್ಳಿ)

3000 ಮೀಟರ್ ಓಟ: ಪ್ರಥಮ: ಸಿ.ಎನ್.ಹರೀಶ (ಜಿ.ಎಚ್.ಎಸ್. ಕುಂದಲಗುರ್ಕಿ), ಕೀರ್ತಿ (ಸುಮುಖ, ಎಚ್. ಕ್ರಾಸ್) ದ್ವಿತೀಯ: ಸಿ.ಭರತ್ (ಸುಮುಖ, ಎಚ್.ಕ್ರಾಸ್), ಅರ್ಪಿತಾ (ಸುಮುಖ, ಎಚ್.ಕ್ರಾಸ್)
5 ಕಿ.ಮೀ.ನಡಿಗೆ: ಪ್ರಥಮ: ಸಿ.ಭರತ್ (ಸುಮುಖ, ಎಚ್. ಕ್ರಾಸ್), ಸ್ವಾತಿ (ನವೋದಯ, ನಡಿಪಿನಾಯಕನಹಳ್ಳಿ)

ದ್ವಿತೀಯ: ನಾರಾಯಣಗುರು (ಸುಮುಖ, ಎಚ್.ಕ್ರಾಸ್), ಕೀರ್ತಿ (ಸುಮುಖ, ಎಚ್.ಕ್ರಾಸ್) ಉದ್ದ ಜಿಗಿತ: ಪ್ರಥಮ: ಶಬಾನ್ ಪಾಷ (ಎಸ್.ವಿ.ಎ.ಆರ್, ಶಿಡ್ಲಘಟ್ಟ), ವೈಷ್ಣವಿ (ಜಿ.ಎಚ್.ಎಸ್. ಚೀಮಂಗಲ) ದ್ವಿತೀಯ: ಇರ್ಷಾದ್ ಪಾಷ (ಸರಸ್ವತಿ, ಶಿಡ್ಲಘಟ್ಟ), ಮಾನಸ (ನವೋದಯ, ನಡಿಪಿನಾಯಕನಹಳ್ಳಿ)

ಎತ್ತರ ಜಿಗಿತ: ಪ್ರಥಮ: ಇರ್ಷಾದ್ ಪಾಷ (ಸರಸ್ವತಿ, ಶಿಡ್ಲಘಟ್ಟ), ಅರ್ಪಿತಾ (ನವೋದಯ, ನಡಿಪಿನಾಯಕ ನ ಹಳ್ಳಿ) ದ್ವಿತೀಯ: ಎಂ.ಅಮರ್ (ಎಸ್.ವಿ.ಎಚ್.ಎಸ್. ಮಳ್ಳೂರು), ಜೀವಿತಾ (ಶಾರದಾ, ಶಿಡ್ಲಘಟ್ಟ)
ತ್ರಿವಿಧ ಜಿಗಿತ: ಪ್ರಥಮ: ಪ್ರಭಾಕರ್(ಜಿ.ಎಚ್.ಎಸ್. ಆನೆಮಡುಗು), ಅರ್ಪಿತಾ (ನವೋದಯ, ನಡಿಪಿನಾಯಕನ ಹಳ್ಳಿ) ದ್ವಿತೀಯ: ಮಂಜುನಾಥ (ಜಿ.ಎಚ್.ಎಸ್. ಗಂಜಿಗುಂಟೆ), ಸವಿತಾ (ಜಿ.ಎಚ್.ಎಸ್. ಆನೆಮಡುಗು)

ಗುಂಡು ಎಸೆತ: ಪ್ರಥಮ: ಎನ್.ನವೀನ್ ರಾಜ (ನವೋದಯ, ನಡಿಪಿನಾಯಕನಹಳ್ಳಿ), ಎಂ.ಶಿಲ್ಪ (ಜಿ.ಎಚ್. ಎಸ್. ಜಂಗಮಕೋಟೆ) ದ್ವಿತೀಯ: ಎ.ಫರೀದ್ ಬೇಗ್ (ಸರಸ್ವತಿ, ಶಿಡ್ಲಘಟ್ಟ), ಎಸ್.ಭವಾನಿ (ಎಸ್.ವಿ.ಎಚ್.ಎಸ್. ಮಳ್ಳೂರು)

ಚಕ್ರ ಎಸೆತ: ಪ್ರಥಮ: ಸುಬ್ರಮಣಿ (ಜಿ.ಎಚ್.ಎಸ್. ಜಂಗಮಕೋಟೆ), ಕೆ.ಎ.ಮಂಗಳ (ದ್ಯಾವಪ್ಪನಗುಡಿ)
ದ್ವಿತೀಯ: ಎಸ್.ಎನ್.ಮೂರ್ತಿ (ಜಿ.ಎಚ್.ಎಸ್. ಜಂಗಮಕೋಟೆ), ಡಿ.ಮೋನಿಷಾ (ಜಿ.ಎಚ್.ಎಸ್. ತುಮ್ಮನಹಳ್ಳಿ)

`ಕ್ರೀಡಾಸಕ್ತಿ ಬೆಳೆಸಿಕೊಳ್ಳಿ~
ತಾಲ್ಲೂಕು ಮಟ್ಟದ ಕ್ರೀಡೆಗಳಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಗಣನೀಯ ಪ್ರಮಾಣದಲ್ಲಿ ಕಡಿಮೆಯಾಗುತ್ತಿರುವುದು ವಿಷಾದನೀಯ ಸಂಗತಿ ಎಂದು ತಾಲ್ಲೂಕು ಪಂಚಾಯಿತಿ ಅಧ್ಯಕ್ಷ ವೇಣುಗೋಪಾಲ್ ವಿಷಾದಿಸಿದರು.

ಪಟ್ಟಣದ ನೆಹರೂ ಕ್ರೀಡಾಂಗಣದಲ್ಲಿ ಸೋಮವಾರ ಜಿಲ್ಲಾ ಪಂಚಾಯಿತಿ ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ಜಂಟಿ ಯಾಗಿ ಆಯೋಜಿಸಿದ್ದ ತಾಲ್ಲೂಕು ಮಟ್ಟದ ಹಿರಿಯ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಕ್ರೀಡಾಕೂಟ ಉದ್ಘಾಟಿಸಿ  ಮಾತನಾಡಿದರು.

ಟಿವಿ, ಕಂಪ್ಯೂಟರ್ ಇನ್ನಿತರರ ಆಧುನಿಕ ಮಾಧ್ಯಮಗಳ ಆಕರ್ಷಣೆಯಿಂದಾಗಿ ವಿದ್ಯಾರ್ಥಿಗಳು ಕ್ರೀಡೆಗಳತ್ತ ಆಸಕ್ತಿ ಕಳೆದುಕೊಳ್ಳುತ್ತಿದ್ದಾರೆ. ದೈಹಿಕ ಹಾಗೂ ಮಾನಸಿಕ ದೃಢತೆ ಹೊಂದಲು ಕ್ರೀಡೆಗಳಲ್ಲಿ ಭಾಗವಹಿಸುವುದು ಅತ್ಯಗತ್ಯ ಎಂದರು.

ಬಿಇಒ ಎನ್.ಶ್ರೀಕಂಠ ಮಾತನಾಡಿ, `ತಾಲ್ಲೂಕು ಮಟ್ಟದ ಕ್ರೀಡಾಕೂಟದಲ್ಲಿ ಸ್ಪರ್ಧಾಳುಗಳ ಆಯ್ಕೆಗೆ ಪ್ರತಿಭೆ ಮಾತ್ರ ಮಾನದಂಡವಾಗಬೇಕು. ಶಿಕ್ಷಕರು ತಾರತಮ್ಯ ಮಾಡಬಾರದು~ ಎಂದರು.  ತಾಲ್ಲೂಕು ಪಂಚಾಯಿತಿ ಇಒ ನಾಗಪ್ಪ, ಪ್ರಭಾರಿ ಜಿಲ್ಲಾ ದೈಹಿಕ ಶಿಕ್ಷಣಾಧಿಕಾರಿ ಪಿ.ಮುನಿ ಸ್ವಾಮಿ, ತಾಲ್ಲೂಕು ಕ್ರೀಡಾಕೂಟ ವ್ಯವಸ್ಥಾಪಕ ವಿ.ಚಂದ್ರ ಶೇಖರ್, ಶ್ರೀರಾಮಯ್ಯ, ಕೆ.ಬಿ.ಅರುಣಾ, ಪ್ರಭಾಕರ್‌ರೆಡ್ಡಿ, ಪಿ.ಅಶ್ವತ್ಥನಾರಾಯಣ, ಗಂಗಶಿವಪ್ಪ ಇತರರು ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.