ADVERTISEMENT

ಸಂವಿಧಾನ ದಿನಾಚರಣೆ

​ಪ್ರಜಾವಾಣಿ ವಾರ್ತೆ
Published 27 ನವೆಂಬರ್ 2020, 6:05 IST
Last Updated 27 ನವೆಂಬರ್ 2020, 6:05 IST
ಗುಡಿಬಂಡೆ ಪಟ್ಟಣದ ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಅರ್.ಶಿವಕುಮಾರ ಹಾಗೂ ಗಣ್ಯರು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.
ಗುಡಿಬಂಡೆ ಪಟ್ಟಣದ ಜೆಎಂಎಫ್.ಸಿ ನ್ಯಾಯಾಲಯದಲ್ಲಿ ನ್ಯಾಯಾಧೀಶ ಅರ್.ಶಿವಕುಮಾರ ಹಾಗೂ ಗಣ್ಯರು ಸಂವಿಧಾನ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು.   

ಗುಡಿಬಂಡೆ:‘ದೇಶದ ಆಡಳಿತ ಸುಸೂತ್ರವಾಗಿ ನಡೆಯಲು ಸಂವಿಧಾನವನ್ನು 1949ರ ನ. 26ರಂದು ಜಾರಿಗೆ ಬಂದಿದ್ದು, ಅಂದಿನಿಂದ ದೇಶದಲ್ಲಿ ಸಂವಿಧಾನ ದಿನಾಚರಣೆ ನಡೆಸಲಾಗುತ್ತಿದೆ’ ಎಂದು ನ್ಯಾಯಾಧೀಶ ಆರ್. ಶಿವಕುಮಾರ್ ತಿಳಿಸಿದರು.

ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲ್ಲೂಕು ಕಾನೂನು ಸೇವಾ ಸಮಿತಿ ಹಾಗೂ ವಕೀಲರ ಸಂಘ ಏರ್ಪಡಿಸಲಾಗಿದ್ದ ಸಂವಿಧಾನ ದಿನಾಚರಣೆಯಲ್ಲಿ ಮಾತನಾಡಿದರು.

ಹಿರಿಯ ವಕೀಲ ನಾರಾಯಣಸ್ವಾಮಿ ಮಾತನಾಡಿ, ಸಂವಿಧಾನದಡಿ ದೇಶದ ಪ್ರತಿಯೊಬ್ಬ ಪ್ರಜೆಗೂ ಹಕ್ಕು, ಕರ್ತವ್ಯಗಳನ್ನು ನೀಡಲಾಗಿದೆ ಎಂದು ತಿಳಿಸಿದರು.‌

ADVERTISEMENT

ವಕೀಲರ ಸಂಘದ ಪಿ. ಶಿವಪ್ಪ ಸಹಾಯಕ ಸರ್ಕಾರಿ ಅಭಿಯೋಜಕ ವಿ. ರಾಮೂರ್ತಿ, ವಕೀಲರಾದ ರಾಮನಾಥರೆಡ್ಡಿ, ಜಿ.ಎಂ. ಅನಿಲ್ ಕುಮಾರ್, ಎ. ಗಂಗಾಧರಪ್ಪ, ಪಿ.ವಿ. ಲಕ್ಷ್ಮೀನಾರಾಯಣ, ಶಿವಾನಂದರೆಡ್ಡಿ, ಟಿ.ಸಿ. ಅಶ್ವಥರೆಡ್ಡಿ, ಎ. ವೆಂಕಟೇಶ, ಎಸ್.ವಿ. ನಂದೀಶ್ವರ ರೆಡ್ಡಿ, ಎನ್. ನರಸಿಂಹಪ್ಪ, ಮಂಜುನಾಥ, ಗಂಗರಾಜು, ಲಕ್ಷ್ಮೀ, ಕೆ.ಪಿ. ಬದರಿನಾಥ, ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.