ADVERTISEMENT

ಕ್ರೀಡಾಕೂಟಕ್ಕೆ ಜಿಲ್ಲಾ ತಂಡ ಆಯ್ಕೆ

​ಪ್ರಜಾವಾಣಿ ವಾರ್ತೆ
Published 21 ಆಗಸ್ಟ್ 2019, 14:00 IST
Last Updated 21 ಆಗಸ್ಟ್ 2019, 14:00 IST
41ನೇ ಕಿರಿಯರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಿಲ್ಲಾ ತಂಡ
41ನೇ ಕಿರಿಯರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಆಯ್ಕೆಯಾದ ಜಿಲ್ಲಾ ತಂಡ   

ಚಿಕ್ಕಬಳ್ಳಾಪುರ: ಉಡುಪಿ ಜಿಲ್ಲೆಯ ಅಜ್ಜರಕಾಡು ಜಿಲ್ಲಾ ಕ್ರೀಡಾಂಗಣದಲ್ಲಿ ಆ. 23 ರಿಂದ 25 ರ ವರೆಗೆ ನಡೆಯುವ 41ನೇ ಕಿರಿಯರ ರಾಜ್ಯಮಟ್ಟದ ಕ್ರೀಡಾಕೂಟಕ್ಕೆ ಜಿಲ್ಲಾ ತಂಡ ಆಯ್ಕೆ ಮಾಡಲಾಯಿತು.


ರಾಜ್ಯ ಅಥ್ಲೆಟಿಕ್ ಅಸೋಸಿಯೇಷನ್ ಜಂಟಿ ಕಾರ್ಯದರ್ಶಿ ಮಂಚನಬಲೆ ಶ್ರೀನಿವಾಸ್ ಅವರ ನೇತೃತ್ವದಲ್ಲಿ ಜಿಲ್ಲಾ ತಂಡದ ಆಯ್ಕೆ ನಡೆಯಿತು. 14 ವರ್ಷ ವಯೋಮಾನದವರ 100 ಮೀಟರ್ ಓಟದ ಸ್ಪರ್ಧೆಗೆ ಲೀಲೋಲಿತರೆಡ್ಡಿ, ಮಾನಸ, ನರೇಂದ್ರ, 600 ಮೀಟರ್ ಓಟಕ್ಕೆ ಅರುಣ್, ಅಪವತ್ ಹಾಗೂ ಉದ್ದ ಜಿಗಿತದಲ್ಲಿ ಎಸ್.ಸಾಹಿಲ್, ಕಾರ್ತಿಕ್ ಅವರನ್ನು ಆಯ್ಕೆ ಮಾಡಲಾಯಿತು.


16 ವರ್ಷದವರ ವಿಭಾಗದ 100 ಮೀಟರ್ ಓಟದ ಸ್ಪರ್ಧೆಗೆ ಕಾವ್ಯಾ, ಲಿಖಿತ್‌ ಕುಮಾರ್, 200 ಮೀಟರ್ ಓಟಕ್ಕೆ ಕಾವ್ಯಾ, ವಾಣಿ, 400 ಮೀಟರ್ ಓಟಕ್ಕೆ ನವೀದ್‌ಪಾಷಾ, ರಾಹಿಲ್, ಫರ್ಹಾನ್, ಉದ್ದ ಜಿಗಿತದಲ್ಲಿ ಕೆ.ಎಂ.ಲಿಖಿತ್‌ ಕುಮಾರ್, ಕೆ.ವಿ ಶರತ್, ಚಕ್ರ ಎಸೆತ ಸ್ಪರ್ಧೆಗೆ ಎಂ.ವಿನಯ್, ವರುಣ್‌ ರೆಡ್ಡಿ, ಗುಂಡು ಎಸೆತಕ್ಕೆ ವಿಶ್ವಾಸ್, ಪರ್ಹಾನ್, ಹ್ಯಾಮರ್ ಥ್ರೋಗೆ ವರುಣ್ ರೆಡ್ಡಿ, ಕೆ.ರಹಿಲ್, 2000 ಮೀಟರ್ ಓಟದ ಸ್ಪರ್ಧೆಗೆ ನಿತಿನ್, ಭರ್ಜಿ ಎಸೆತ ಸ್ಪರ್ಧೆಗೆ ನವೀದ್ ಪಾಷಾ ಅವರನ್ನು ಆಯ್ಕೆ ಮಾಡಲಾಗಿದೆ.

ADVERTISEMENT


18 ವರ್ಷ ವಯೋಮಾನದವರ 1500 ಮೀಟರ್ ಓಟಕ್ಕೆ ಗೌತಮ್, ಬಾಬಾಜಾನ್, 400ಮೀಟರ್ ಓಟಕ್ಕೆ ರಾಜೇಶ್‌, 3,000 ಮೀಟರ್ ಓಟಕ್ಕೆ ಎನ್.ಗೌತಮ್, 5,000 ಮೀಟರ್ ನಡಿಗೆ ಓಟ ಹಾಗೂ ಗುಂಡು ಎಸೆತಕ್ಕೆ ಎಂ.ಲೋಕೇಶ್ ಮತ್ತು 20 ವರ್ಷದ ವಿಭಾಗದ ಗುಂಡು ಎಸೆತ ಸ್ಪರ್ಧೆಗೆ ಎಸ್.ಕೆ.ಸತೀಶ್ ಅವರನ್ನು ಜಿಲ್ಲಾ ತಂಡಕ್ಕೆ ಆಯ್ಕೆ ಮಾಡಲಾಗಿದೆ.


ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಪದಾಧಿಕಾರಿಗಳಾದ ಉದ್ದ ಮಂಜುನಾಥ್, ಜಯಂತಿ ಗ್ರಾಮದ ನಾರಾಯಣಸ್ವಾಮಿ, ಮಂಜುನಾಥ್, ಗೌರೀಶ್ ಹಾಜರಿದ್ದರು. ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ಅಧ್ಯಕ್ಷ ಕೆ.ವಿ.ನವೀನ್‌ ಕಿರಣ್‍ ಅವರು ತಂಡಕ್ಕೆ ಶುಭ ಹಾರೈಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.