ADVERTISEMENT

ಶಿಡ್ಲಘಟ್ಟ: ಬರಡು ರಾಸು ತಪಾಸಣಾ ಶಿಬಿರ

​ಪ್ರಜಾವಾಣಿ ವಾರ್ತೆ
Published 23 ಅಕ್ಟೋಬರ್ 2021, 4:16 IST
Last Updated 23 ಅಕ್ಟೋಬರ್ 2021, 4:16 IST
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಸುಗಳನ್ನು ಕರೆ ತಂದು ಚಿಕಿತ್ಸೆ ಪಡೆದುಕೊಂಡರು
ಶಿಡ್ಲಘಟ್ಟ ತಾಲ್ಲೂಕಿನ ಅಪ್ಪೇಗೌಡನಹಳ್ಳಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಸುತ್ತಮುತ್ತಲಿನ ಗ್ರಾಮಸ್ಥರು ರಾಸುಗಳನ್ನು ಕರೆ ತಂದು ಚಿಕಿತ್ಸೆ ಪಡೆದುಕೊಂಡರು   

ಶಿಡ್ಲಘಟ್ಟ: ಸಾಕು ಪ್ರಾಣಿಗಳಲ್ಲಿ ಮಾತ್ರವಲ್ಲದೇ ವನ್ಯಮೃಗಗಳಲ್ಲೂ ಕಂಡುಬರುವ ‘ಗಳಲೆ ರೋಗ’ (ಗಂಟಲು ಬೇನೆ- ಪಾಸ್ಚುರೆಲ್ಲಾ ಮಲ್ಟೋಸಿಡಾ) ಬಂದಾಗ ಅಸಡ್ಡೆ ತೋರಿದರೆ ಅದು ಜಾನುವಾರು ಪ್ರಾಣಕ್ಕೂ ಕುತ್ತಾಗಬಹುದು. ಎಷ್ಟೋ ಬಾರಿ ಈ ಸಮಸ್ಯೆ ಆರಂಭ ಆಗಿರುವುದು ರೈತರಿಗೆ ತಿಳಿಯುವುದೇ ಇಲ್ಲ. ಇತ್ತೀಚಿನ ದಿನಗಳಲ್ಲಿ ಆಗ್ಗಾಗ್ಗೆ ಕಂಡುಬರುತ್ತಿರುವ ಈ ರೋಗದ ಕುರಿತಾಗಿ ಮಾಹಿತಿ ತಿಳಿದಿರಬೇಕು ಎಂದು ವಿಜ್ಞಾನಿ ಪಿ.ಎಚ್. ರಾಮಾಂಜಿನಿ ಗೌಡ ತಿಳಿಸಿದರು.

ತಾಲ್ಲೂಕಿನ ಅಪ್ಪೆಗೌಡನಹಳ್ಳಿಯಲ್ಲಿ ಗ್ರಾಮೀಣ ಕೃಷಿ ಕಾರ್ಯಾನುಭವ ಚಟುವಟಿಕೆ ಅಡಿಯಲ್ಲಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ವಿದ್ಯಾರ್ಥಿಗಳಿಂದ ಆಯೋಜಿಸಿದ್ದ ಬರಡು ರಾಸುಗಳ ತಪಾಸಣಾ ಹಾಗೂ ಪಶು ಆರೋಗ್ಯ ಚಿಕಿತ್ಸಾ ಶಿಬಿರದಲ್ಲಿ ಅವರು ಮಾತನಾಡಿದರು.

ಈ ರೋಗ ಹರಡಿಸುವ ರೋಗಾಣು ಆಹಾರ ಮತ್ತು ನೀರಿನ ಮುಖಾಂತರ ಪ್ರಾಣಿಗಳ ದೇಹ ಪ್ರವೇಶಿಸುತ್ತದೆ. ಈ ರೋಗಾಣು ಪ್ರಾಣಿಯ ದೇಹದಲ್ಲಿ ಪ್ರವೇಶ ಮಾಡಿದ ನಂತರ ವಾತಾವರಣದ ವೈಪರೀತ್ಯದಿಂದ ಇದು ದೇಹವನ್ನು ಆಕ್ರಮಿಸಿಕೊಂಡು ಪ್ರಾಣಿಗಳ ಪ್ರಾಣಕ್ಕೆ ಕುತ್ತು ತರುತ್ತದೆ ಎಂದರು.

ADVERTISEMENT

ಸುಮಾರು ಒಂದು ನೂರು ಹಸುಗಳನ್ನು ತಪಾಸಣೆ ಮಾಡಲಾಯಿತು. ಉಚಿತ ಚಿಕಿತ್ಸೆ ಮತ್ತು ಔಷಧಿ ವಿತರಿಸಲಾಯಿತು. ಅಪ್ಪೆಗೌಡನಹಳ್ಳಿ, ಗಂಗನಹಳ್ಳಿ, ಕಂಬದಹಳ್ಳಿ ಸೇರಿದಂತೆ ಸುತ್ತಮುತ್ತಲಿನ ರೈತರು ತಮ್ಮ ಹಸುಗಳನ್ನು ತಪಾಸಣೆ ಮಾಡಿಸಿದರು.

ಕೃಷಿ ವಿಸ್ತರಣ ಅಧಿಕಾರಿ ಡಾ.ವೈ.ಎನ್. ಶಿವಲಿಂಗಯ್ಯ, ಟಿ.ಎಂ. ಅರವಿಂದ, ದಯಾನಂದ, ಶ್ರೀರಾಮ, ಡಾ.ತಿಮ್ಮರಾಜು, ಡಾ.ಶ್ರೀನಿವಾಸ, ಡಾ.ಕೃಷ್ಣಮೂರ್ತಿ, ಡಾ.ಸುಚಿತ್ರಾ, ಡಾ.ಪೂಜಾರ ಸೂರಪ್ಪ, ಡಾ.ಆನಂದ್ ಮಾನೆಗಾರ್, ಡಾ.ಗಣೇಶಮೂರ್ತಿ, ಅಪ್ಪಾಜಿಗೌಡ, ಮುನಿರೆಡ್ಡಿ, ಎಂಪಿಸಿಎಸ್ ಮಧು, ಮುನೀಂದ್ರ ಹಾಜರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.