ADVERTISEMENT

ಬ್ರೌನ್ ಶುಗರ್ ವಶ: 11ಜನರ ಬಂಧನ

​ಪ್ರಜಾವಾಣಿ ವಾರ್ತೆ
Published 13 ಜೂನ್ 2011, 19:30 IST
Last Updated 13 ಜೂನ್ 2011, 19:30 IST

ಬಣಕಲ್ (ಮೂಡಿಗೆರೆ ತಾಲ್ಲೂಕು): ತಾಲ್ಲೂಕಿನ ಕೊಟ್ಟಿಗೆಹಾರ ಬಳಿ ಬ್ರೌನ್ ಶುಗರ್ ಮಾರಾಟಕ್ಕೆ ಸಂಚು ಹೂಡಿದ್ದ 11ಮಂದಿಯನ್ನು ಬಣಕಲ್ ಪೊಲೀಸರು ಸೋಮವಾರ ಬಂಧಿಸಿದ್ದಾರೆ.

ಈ ತಂಡ ಕೊಳ್ಳೇಗಾಲದಿಂದ ಈ ಮಾದಕ ವಸ್ತು ತಂದು, ಹಾಸನ ಹಾಗೂ ಇತರೆ ಜಿಲ್ಲೆಗಳಲ್ಲಿ ಮಾರಾಟ ಮಾಡಲು ಸಂಚು ರೂಪಿಸುತ್ತಿದ್ದ ವೇಳೆ ಬಂಧಿಸಲಾಯಿತು.

ಕೊಳ್ಳೇಗಾಲ ಬಳಿಯ ಒಕ್ಕನಹಳ್ಳಿಯ ಮಹೇಂದ್ರ, ಮದ್ದೂರಿನ ರಾಜೇಶ, ಮಾಳಿಗನಾಡು ಗ್ರಾಮದ ಸುನಿಲ್, ಸುರೇಶ್, ಹಾಸನದ ರವಿಶೆಟ್ಟಿ, ಮಂಜೇಗೌಡ, ತಿಲಕ್ ಕುಮಾರ್, ನಿತಿನ್ ರಾಜ್, ಮಹೇಶ, ಬೆಂಗಳೂರಿನ ರಾಘವೇಂದ್ರ, ಮಂಜುನಾಥ ಬಂಧಿತರು.ಬಂಧಿತರನ್ನು ಚಿಕ್ಕಮಗಳೂರು ನ್ಯಾಯಾಲಯಕ್ಕೆ ಒಪ್ಪಿಸಲಾಗಿದೆ.

ಬಂಧಿತರಿಂದ 835ಗ್ರಾಂ ಬ್ರೌನ್ ಶುಗರ್, ಏಳು ಮೊಬೈಲ್, ಎರಡೂವರೆ ಸಾವಿರ ನಗದು  ವಶಪಡಿಸಿಕೊಳ್ಳಲಾಗಿದೆ.ಪ್ರಮುಖ ಆರೋಪಿ ಮಹೇಶ್ ಕೊಟ್ಟಿಗೆಹಾರದಲ್ಲಿ ಸಂಚು ರೂಪಿಸುತ್ತಿದ್ದಾಗ ಖಚಿತ ಮಾಹಿತಿಯಂತೆ ಹಾಗೂ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ವಿಕಾಸ್ ಕುಮಾರ್, ಡಿವೈಎಸ್‌ಪಿ ವೇದಮೂರ್ತಿ, ಮೂಡಿಗೆರೆ ವೃತ್ತ ನಿರೀಕ್ಷಕ ಬಷೀರ್ ಅಹಮದ್, ಮಾರ್ಗದರ್ಶನದಲ್ಲಿ ಬಣಕಲ್ ಠಾಣಾಧಿಕಾರಿ ಬಾಲಕೃಷ್ಣ, ಸಿಬ್ಬಂದಿ ಕೃಷ್ಣೇಗೌಡ, ನಂದೀಶ್,ಪ್ರವೀಣ್, ರವೀಂದ್ರ ಕಾರ್ಯಾಚರಣೆ ನಡೆಸಿದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.