ADVERTISEMENT

ಚಿಕ್ಕಮಗಳೂರು 6 ತಾಲ್ಲೂಕುಗಳ ಪ್ರಾಥಮಿಕ, ಪ‍್ರೌಢಶಾಲೆಗಳಿಗೆ 9ರವರೆಗೆ ರಜೆ

​ಪ್ರಜಾವಾಣಿ ವಾರ್ತೆ
Published 5 ಜುಲೈ 2022, 13:43 IST
Last Updated 5 ಜುಲೈ 2022, 13:43 IST
   

ಚಿಕ್ಕಮಗಳೂರು: ಸತತವಾಗಿ ಮಳೆಯಾಗುತ್ತಿರುವುದಿಂದ ಮುಂಜಾಗ್ರತಾ ಕ್ರಮವಾಗಿ ಜಿಲ್ಲೆಯ ಆರು ತಾಲ್ಲೂಕುಗಳಲ್ಲಿ (ಚಿಕ್ಕಗಳೂರು ತಾಲ್ಲೂಕಿನ ಅಂಬ, ಲಕ್ಯಾ ಹೋಬಳಿ ಹೊರತುಪಡಿಸಿ) ಪ್ರಾಥಮಿಕ ಮತ್ತು ಪ್ರೌಢಶಾಲೆಗಳಿಗೆ ಇದೇ 9ರವರೆಗೆ ರಜೆ ಘೋಷಿಸಲಾಗಿದೆ.


ಚಿಕ್ಕಮಗಳೂರು, ಮೂಡಿಗೆರೆ, ಕೊಪ್ಪ, ಶೃಂಗೇರಿ, ಕಳಸ ಹಾಗೂ ಎನ್‌.ಆರ್‌.ಪುರ ತಾಲ್ಲೂಕುಗಳ ಶಾಲೆಗಳಿಗೆ ಇದೇ 6ರಿಂದ ರಜೆ ಘೋಷಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ.ಎನ್‌.ರಮೇಶ್‌ ಆದೇಶದಲ್ಲಿ ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT