ADVERTISEMENT

ಚಿರತೆ ಚರ್ಮ ಮಾರಾಟ ಯತ್ನ; ಮೂವರ ಬಂಧನ

​ಪ್ರಜಾವಾಣಿ ವಾರ್ತೆ
Published 8 ಜೂನ್ 2022, 10:26 IST
Last Updated 8 ಜೂನ್ 2022, 10:26 IST
ಚಿರತೆ ಚರ್ಮ ಮಾರಾಟ ಯತ್ನ; ಮೂವರ ಬಂಧನ
ಚಿರತೆ ಚರ್ಮ ಮಾರಾಟ ಯತ್ನ; ಮೂವರ ಬಂಧನ   

ಚಿಕ್ಕಮಗಳೂರು: ತಾಲ್ಲೂಕಿನ ಇಂದಾವರ ಗ್ರಾಮದ ಫ್ಯಾಕ್ಟರಿ ಬಡಾವಣೆಯ ಮಲ್ನಾಡ್‌ ಸಮುದಾಯ ಭವನ ಬಳಿ ಚಿರತೆ ಚರ್ಮ ಮಾರಾಟಕ್ಕೆ ಯತ್ನಿಸಿದ ಮೂವರನ್ನು ಬಂಧಿಸಿ, ಚಿರತೆ ಚರ್ಮವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಇಂದಾವರದ ಪರ್ವತ (48), ಕಾಂತರಾಜ (52), ಚಿಕ್ಕಮಗಳೂರಿನ ಎಪಿಎಂಸಿ ಮಾರುಕಟ್ಟೆಯ ರೈಟರ್‌ ಕಾಂತರಾಜ (52) ಹಾಗೂ ದಾವಣಗೆರೆ ಜಿಲ್ಲೆಯ ದಿಬ್ಬದಹಳ್ಳಿಯ ಕುಲುಮೆ ಕೆಲಸಗಾರ ಕೆ.ಟಿ.ಶ್ರೀನಿವಾಸ್‌ ಬಂಧಿತರು.

ಚಿಕ್ಕಮಗಳೂರಿನ ಸಿಐಡಿ ಪೊಲೀಸ್‌ ಅರಣ್ಯ ಸಂಚಾರಿ ದಳದ ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಪಿಎಸ್‌ಐ ಎಲ್‌.ಎಂ.ಶರತ್‌, ಸಿಬ್ಬಂದಿ ಡಿ.ಎಚ್‌.ದಿನೇಶ್‌, ಎಸ್‌.ಕೆ.ದಿವಾಕರ, ಕೆ.ಎಸ್‌.ದಿಲೀಪ್‌, ಎ.ಜಿ.ಹಾಲೇಶ, ಎಚ್‌.ದೇವರಾಜ, ವೈ.ಹೇಮಾವತಿ ಕಾರ್ಯಾಚರಣೆ ತಂಡದಲ್ಲಿದ್ದರು.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.