ADVERTISEMENT

20 ಖಾಲಿ ಸಿಲಿಂಡರ್ ಸಂಗ್ರಹಿಸಿದ ಪೊಲೀಸರು

​ಪ್ರಜಾವಾಣಿ ವಾರ್ತೆ
Published 17 ಮೇ 2021, 2:41 IST
Last Updated 17 ಮೇ 2021, 2:41 IST
ಚಳ್ಳಕೆರೆಯಲ್ಲಿ ಭಾನುವಾರ ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಹಾಗೂ ಪೊಲೀಸ್‌ ಸಿಬ್ಬಂದಿ ಖಾಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿದರು
ಚಳ್ಳಕೆರೆಯಲ್ಲಿ ಭಾನುವಾರ ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ ಹಾಗೂ ಪೊಲೀಸ್‌ ಸಿಬ್ಬಂದಿ ಖಾಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿದರು   

ಚಳ್ಳಕೆರೆ: ಕೊರೊನಾ ಸೋಂಕಿತರಿಗೆ ಆಮ್ಲಜನಕದ ಕೊರತೆ ಉಂಟಾಗದಂತೆ ತಡೆಯಲು ಭಾನುವಾರ ಪೊಲೀಸರು, ನಗರದ ವಿವಿಧ ಗ್ಯಾರೇಜ್‌ಗಳಿಗೆ ಭೇಟಿ ನೀಡಿ 20 ಖಾಲಿ ಸಿಲಿಂಡರ್‌ಗಳನ್ನು ಸಂಗ್ರಹಿಸಿದರು.

ಪಿಎಸ್‍ಐ ಮಂಜುನಾಥ ಅರ್ಜುನ ಲಿಂಗಾರೆಡ್ಡಿ, ‘ಆಮ್ಲಜನಕದ ಅಭಾವದಿಂದ ಸೋಂಕಿತರ ಸಾವಿನ ಪ್ರಕರಣಗಳು ದಿನ ದಿನಕ್ಕೂ ಹೆಚ್ಚುತ್ತಿವೆ. ಗ್ಯಾಸ್ ಪ್ಲಾಂಟ್‍ಗಳಲ್ಲಿ ಆಮ್ಲಜನಕ ದೊರೆತರೂ ಅದನ್ನು ತುಂಬಿಸಲು ಸಿಲಿಂಡರ್‌ಗಳು ಹೆಚ್ಚಿನ ಪ್ರಮಾಣದಲ್ಲಿ ಇಲ್ಲ. ಇದರಿಂದ ಸೋಂಕಿತರಿಗೆ ಸಕಾಲದಲ್ಲಿ ಆಮ್ಲಜನಕ ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲ’
ಎಂದರು.

ಸಂಗ್ರಹಿಸಿರುವ 20 ಖಾಲಿ ಸಿಲಿಂಡರ್‌ಗಳನ್ನು ಸಾರ್ವಜನಿಕ ಸರ್ಕಾರಿ ಆಸ್ಪತ್ರೆಗೆ ಒಪ್ಪಿಸಲಾಗುವುದು. ಮನೆ, ಅಂಗಡಿ ಹಾಗೂ ಸಂಘ–ಸಂಸ್ಥೆಯಲ್ಲಿ ಖಾಲಿ ಸಿಲಿಂಡರ್ ಹೆಚ್ಚುವರಿಯಾಗಿ ಇದ್ದಲ್ಲಿ ಕೂಡಲೇ ಇಲಾಖೆಯ ಗಮನಕ್ಕೆ ತರುವುದರ ಮೂಲಕ ಸೋಂಕಿತರಿಗೆ ನೆರವಾಗಬೇಕು ಎಂದು ಅವರು ಮನವಿ ಮಾಡಿದರು.

ADVERTISEMENT

ಗ್ಯಾರೇಜ್ ಮಾಲೀಕ, ಖಲಿಉಲ್ಲಾ, ಮಂಜುನಾಥ್, ರಂಗಸ್ವಾಮಿ, ವೆಂಕಟೇಶ್, ಅನಿಫ್, ಸುಬಾನುಲ್ಲಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.