ಹೊಸದುರ್ಗ: ತಾಲ್ಲೂಕಿನ ಜಂತಿಕೊಳಲು ಗ್ರಾಮದಲ್ಲಿ ವಿದ್ಯುತ್ ತಂತಿ ತಾಗಿ 2 ಎಕರೆ ಅಡಿಕೆ ತೋಟಕ್ಕೆ ಬೆಂಕಿ ಬಿದ್ದು, ಅಪಾರ ನಷ್ಟವಾಗಿದೆ.
ರಾಮಚಂದ್ರಪ್ಪ ಅವರಿಗೆ ಸೇರಿದ ಅಡಿಕೆ ತೋಟದಲ್ಲಿದ್ದ ಅಡಿಕೆ ಗಿಡಗಳು ಸುಟ್ಟಿವೆ. ₹ 5 ಲಕ್ಷ ನಷ್ಟ ಆಗಿದೆ ಎಂದು ಅವರು ತಿಳಿಸಿದ್ದಾರೆ.
ಫಸಲು ಬಿಡುತ್ತಿದ್ದ 300 ಗಿಡಗಳು, 400 ಸಣ್ಣ ಗಿಡಗಳು ಹಾಗೂ ಹನಿ ನೀರಾವರಿ ಪೈಪ್ಗಳು ಬೆಂಕಿಗೆ
ಆಹುತಿಯಾಗಿವೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.