ADVERTISEMENT

ವಸತಿ ಶಾಲೆಗಳಿಗೆ ಬಿಇಡಿ ವಿದ್ಯಾರ್ಥಿಗಳ ಭೇಟಿ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2019, 11:12 IST
Last Updated 9 ನವೆಂಬರ್ 2019, 11:12 IST
ಚಳ್ಳಕೆರೆ ಎನ್.ಜಯಣ್ಣ ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಶುಕ್ರವಾರ ನಗರದ ಪಾವಗಡ ರಸ್ತೆ ಬಳಿ ಇರುವ ಆದರ್ಶ ಹಾಗೂ ಮುರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.
ಚಳ್ಳಕೆರೆ ಎನ್.ಜಯಣ್ಣ ಬಿಇಡಿ ಕಾಲೇಜಿನ ಪ್ರಶಿಕ್ಷಣಾರ್ಥಿಗಳು ಶುಕ್ರವಾರ ನಗರದ ಪಾವಗಡ ರಸ್ತೆ ಬಳಿ ಇರುವ ಆದರ್ಶ ಹಾಗೂ ಮುರಾರ್ಜಿ ವಸತಿ ಶಾಲೆಗಳಿಗೆ ಭೇಟಿ ನೀಡಿ ಅಧ್ಯಯನ ನಡೆಸಿದರು.   

ಚಳ್ಳಕೆರೆ: ತರಬೇತಿ ಅವಧಿಯಲ್ಲೇ ರಾಜ್ಯ ಹಾಗೂ ರಾಷ್ಟ್ರೀಯ ಶಿಕ್ಷಣ ಪಠ್ಯ ನೀತಿಯ ಜತೆಗೆ ಶಾಲಾ ನಿರ್ವಹಣೆಯ ಮಹತ್ವವನ್ನು ತಿಳಿದುಕೊಳ್ಳಬೇಕು ಎಂದು ಪ್ರಾಶುಂಪಾಲ ಕೆ.ಟೀಪು ಪ್ರಶಿಕ್ಷಣಾರ್ಥಿಗಳಿಗೆ ಸಲಹೆ ನೀಡಿದರು.

ನಗರದ ಪಾವಗಡ ರಸ್ತೆ ಬಳಿ ಆದರ್ಶ ವಸತಿ ಶಾಲೆ ಹಾಗೂ ಮುರಾರ್ಜಿ ವಸತಿ ಶಾಲೆಗಳಿಗೆ ಎನ್. ಜಯಣ್ಣ ಬಿ.ಇಡಿ ಕಾಲೇಜಿನ ಪ್ರಶಿಕ್ಷರ್ಣಾಥಿಗಳ ಭೇಟಿ ನೀಡಿದಾಗ ಮಾತನಾಡಿದರು.

ಮಕ್ಕಳ ಕಲಿಕಾ ಪ್ರಗತಿ, ಶಾಲಾ ನಿರ್ವಹಣೆ, ಪರಿಸರ ಮತ್ತು ಮಕ್ಕಳ ಆಯ್ಕೆ ಪ್ರಕ್ರಿಯೆ ಕುರಿತು ಮಾಹಿತಿಯನ್ನು ಮಕ್ಕಳಿಗೆ ತಿಳಿಸಿಕೊಟ್ಟರು.

ADVERTISEMENT

ಮುಖ್ಯಶಿಕ್ಷಕ ಶ್ರೀನಿವಾಸ್, ಉಪನ್ಯಾಸಕಿ ರೂಪಪ್ರಸಾದ್, ಜಿ.ವಿಜಯಲಕ್ಷ್ಮೀ, ಶಶಿಕುಮಾರ್, ಸತೀಶ್, ಆರ್. ಪೂರ್ಣಿಮಾ, ಸ್ವಾಮಿ, ಆಶಾ, ಮಂಜುನಾಥ್, ಪುಷ್ಪಾ, ಪ್ರಿಯಾಂಕ, ಕಿರಣ್, ಮಂಜುನಾಥ್, ಚೆನ್ನಕೇಶವ, ಮಲ್ಲಿಕಾರ್ಜುನ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.