ADVERTISEMENT

ಗೂಡ್ಸ್‌ ರೈಲಿಗೆ ಸಿಲುಕಿ ವ್ಯಕ್ತಿ ಸಾವು

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2020, 3:05 IST
Last Updated 17 ಡಿಸೆಂಬರ್ 2020, 3:05 IST
ಕೆ. ನಾಗರಾಜಪ್ಪ
ಕೆ. ನಾಗರಾಜಪ್ಪ   

ಚಿಕ್ಕಜಾಜೂರು: ಚಲಿಸುತ್ತಿದ್ದ ಗೂಡ್ಸ್‌ ರೈಲಿಗೆ ಸಿಲುಕಿ ಚಿಕ್ಕಜಾಜೂರಿನ ತೊಡರ ನಾಳ್‌ ಕೆ. ನಾಗರಾಜಪ್ಪ (51) ಅವರು ಮಂಗಳವಾರ ರಾತ್ರಿ ಮೃತಪಟ್ಟಿದ್ದಾರೆ.

ನಾಗರಾಜಪ್ಪ ಅವರು ಮನೆಗೆ ದಿನಸಿ ವಸ್ತುಗಳನ್ನು ತರಲು ಹೋಗಿ, ಹಿಂತಿರುಗುವಾಗ ಕತ್ತಲೆಯಲ್ಲಿ ರೈಲ್ವೆ ಹಳಿಯನ್ನು ದಾಟುತ್ತಿದ್ದಾಗ ಆಕಸ್ಮಿಕವಾಗಿ ಕಾಲುಜಾರಿ ಬಿದ್ದು, ಈ ಅವಘಡ ಸಂಭವಿಸಿದೆ. ಮರಣೋತ್ತರ ಪರೀಕ್ಷೆ ನಡೆಸಿ, ಕುಟುಂಬಕ್ಕೆ ಶವವನ್ನು ನೀಡಲಾಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT