ಚಿತ್ರದುರ್ಗ: ಮೊಳಕಾಲ್ಮುರು ತಾಲ್ಲೂಕಿನ ರಾಂಪುರ ಗ್ರಾಮದಲ್ಲಿ ಕೆರೆಗೆ ಇಳಿದಿದ್ದ ಇಬ್ಬರು ಕುರಿಗಾಹಿಗಳು ಬುಧವಾರ ನೀರು ಪಾಲಾಗಿದ್ದಾರೆ.
ಕುರಿಗಾಹಿಗಳಾದ ಕರಿಯಣ್ಣ (30) ಪಾಂಡು (25) ಮೃತರು. ರಾಂಪುರ ಹೊರವಲಯದ ಕೆರೆಯಲ್ಲಿ ಈ ದುರಂತ ಸಂಭವಿಸಿದೆ.
ಕುರಿ ಮೇಯಿಸಲು ಹೋಗಿದ್ದ ಕರಿಯಣ್ಣ ಹಾಗೂ ಪಾಂಡು ಅವುಗಳ ಮೈತೊಳೆಯಲು ನೀರಿಗೆ ಇಳಿದಿದ್ದ ವೇಳೆ ಅವಘಡ ಸಂಭವಿಸಿರುವ ಸಾಧ್ಯತೆ ಇದೆ ಎಂದು ಶಂಕಿಸಲಾಗಿದೆ. ರಾಂಪುರ ಠಾಣೆಯ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸುತ್ತಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.