ADVERTISEMENT

ತಹಶೀಲ್ದಾರ್ ವರ್ಗಾವಣೆಗೆ ಕೆಎಟಿ ತಡೆ

​ಪ್ರಜಾವಾಣಿ ವಾರ್ತೆ
Published 10 ಜುಲೈ 2012, 6:00 IST
Last Updated 10 ಜುಲೈ 2012, 6:00 IST

ದಾವಣಗೆರೆ: ತಹಶೀಲ್ದಾರ್ ಡಾ.ಬಿ.ಆರ್. ಹರೀಶ್ ಅವರ ವರ್ಗಾವಣೆಗೆ ಕರ್ನಾಟಕ ಆಡಳಿತ ನ್ಯಾಯ ಮಂಡಳಿ ಸೋಮವಾರ ತಡೆಯಾಜ್ಞೆ ನೀಡಿದೆ.

ಹರೀಶ್ ಅವರು ತಾಲ್ಲೂಕಿನಲ್ಲಿ 28 ತಿಂಗಳು ಕಾರ್ಯ ನಿರ್ವಹಿಸಿದ್ದು ಮೂರು ವರ್ಷ ಪೂರ್ಣಗೊಳಿಸಿಲ್ಲ. ಅವರನ್ನು ವರ್ಗಾವಣೆ ಮಾಡಿದ ಸರ್ಕಾರ ಸ್ಥಳವನ್ನೇ ತೋರಿಸಿಲ್ಲ. ಅಲ್ಲದೇ, ದಾವಣಗೆರೆಗೆ ವರ್ಗವಾಗಿ ಬಂದ ಮುಂಡಗೋಡು ತಹಶೀಲ್ದಾರ್ ಮಂಜುನಾಥ್ ಎಸ್. ಬಳ್ಳಾರಿ, ಮುಂಡಗೋಡಿಗೆ ಕೇವಲ 3 ತಿಂಗಳ ಹಿಂದೆಯಷ್ಟೇ ನಿಯೋಜನೆ ಮೇಲೆ ತೆರಳಿದ್ದಾರೆ. ಈ ಹಿನ್ನೆಲೆಯಲ್ಲಿ ವರ್ಗಾವಣೆಗೆ ತಡೆ ನೀಡಿರುವುದಾಗಿ ಕೆಎಟಿ ತಿಳಿಸಿದೆ.

ಕೆಲವೇ ಸಮಯಕ್ಕೆ ವಾಪಸ್: ಮುಂಡಗೋಡಿನಿಂದ ವರ್ಗಾವಣೆಗೊಂಡ ಮಂಜುನಾಥ್ ಸೋಮವಾರ ಬೆಳಿಗ್ಗೆ ತಾಲ್ಲೂಕು ಕಚೇರಿಗೆ ಆಗಮಿಸಿ ಅಧಿಕಾರ ಸ್ವೀಕರಿಸಿದರು. ಅಧಿಕಾರ ಸ್ವೀಕರಿಸಿದ ಕೆಲ ಸಮಯದಲ್ಲೇ ಹರೀಶ್ ವರ್ಗಾವಣೆಗೆ ಕೆಎಟಿ ತಡೆ ನೀಡಿದ ಹಿನ್ನೆಲೆಯಲ್ಲಿ ಅವರು ವಾಪಸ್ ಆದರು.
 

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.