ADVERTISEMENT

ವೃದ್ಧ ಕೊಲೆ

​ಪ್ರಜಾವಾಣಿ ವಾರ್ತೆ
Published 19 ಜನವರಿ 2012, 9:35 IST
Last Updated 19 ಜನವರಿ 2012, 9:35 IST

ಹರಪನಹಳ್ಳಿ:  ವೃದ್ಧನನ್ನು  ಮಾರಕಾಸ್ತ್ರದಿಂದ ಕೊಚ್ಚಿ  ಕೊಲೆ ಮಾಡಿರುವ ಘಟನೆ ತಾಲ್ಲೂಕಿನ ಚಿಗಟೇರಿ ಗ್ರಾಮದ ಹೊರವಲಯದಲ್ಲಿ ಮಂಗಳವಾರ ರಾತ್ರಿ ನಡೆದಿದೆ.

ಮೃತ ವೃದ್ಧನನ್ನು ದೊಡ್ಡನಗೌಡರ ಮಲ್ಲನಗೌಡ (65) ಎಂದು ಗುರುತಿಸಲಾಗಿದೆ.

ಕಣದ ಮನೆಯಲ್ಲಿ ಮಲಗಿರುವಾಗ ಕೊಲೆ ಮಾಡಲಾಗಿದೆ. ಕೊಲೆಗೆ ನಿಖರ ಕಾರಣ ತಿಳಿದುಬಂದಿಲ್ಲ. ಈ ಕುರಿತು ಕೊಲೆಗೀಡಾದ ಮಲ್ಲನಗೌಡರ ಅವರ ಸಹೋದರ ಉತ್ತಂಗಿ ಕೊಟ್ರಗೌಡ ನೀಡಿದ ದೂರಿನ ಅನ್ವಯ ಚಿಗಟೇರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ಮುಂದುವರಿದಿದೆ.

ADVERTISEMENT

ಘಟನಾ ಸ್ಥಳಕ್ಕೆ ಡಿವೈಎಸ್ಪಿ ರಾಧಾಮಣಿ, ಹರಪನಹಳ್ಳಿ ಠಾಣೆಯ ಪಿಎಸ್‌ಐ ವಸಂತ ವಿ. ಅಸೋದಿ, ಪಿಎಸ್‌ಐ ಸೋಮ್ಲಾನಾಯ್ಕ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.