ADVERTISEMENT

‘ಅಮೆರಿಕದಲ್ಲಿ ಕನ್ನಡ ಕಂಪು’

​ಪ್ರಜಾವಾಣಿ ವಾರ್ತೆ
Published 3 ಫೆಬ್ರುವರಿ 2018, 8:48 IST
Last Updated 3 ಫೆಬ್ರುವರಿ 2018, 8:48 IST

ಚನ್ನಗಿರಿ: 25 ವರ್ಷಗಳಿಂದ ಅಮೆರಿಕದ ಪ್ರತಿಷ್ಠಿತ ಹೆನ್ರಿ ಫೋರ್ಡ್ ಆರೋಗ್ಯ ಕೇಂದ್ರದಲ್ಲಿ ನರವಿಜ್ಞಾನಿಯಾಗಿ ಕೆಲಸ ನಿರ್ವಹಿಸುತ್ತಿರುವ ಡಾ.ನಾಗರಾಜ್ ‘ಅಮೆರಿಕಾ ಕರ್ನಾಟಕ’ ಪುಸ್ತಕ ಬರೆಯುವ ಮೂಲಕ ಕನ್ನಡದ ಕಂಪನ್ನು ಅಲ್ಲಿ ಹರಡಿರುವುದು ಹೆಮ್ಮೆಯ ಸಂಗತಿಎಂದು ರಾಜ್ಯ ನಾಟಕ ಅಕಾಡೆಮಿ ಮಾಜಿ
ಅಧ್ಯಕ್ಷ ಡಾ.ಬಿ.ವಿ. ರಾಜಾರಾಂ ಶ್ಲಾಘಿಸಿದರು.

ತಾಲ್ಲೂಕಿನ ತಾವರೆಕೆರೆ ಗ್ರಾಮದ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಗುರುವಾರ ನಡೆದ ಪುಸ್ತಕ ಬಿಡುಗಡೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

‘ನಾಗರಾಜ್ ಕನ್ನಡಿಗರಿಗೆ ಕನ್ನಡತನವನ್ನು ತೋರಿಸಿದ್ದಾರೆ. ಅನೇಕ ಹೆಸರಾಂತ ಕವಿ ಹಾಗೂ ವಿಮರ್ಶಕರನ್ನು ಚನ್ನಗಿರಿ ತಾಲ್ಲೂಕು ನಾಡಿಗೆ ಕೊಟ್ಟಿದೆ. ಎಚ್.ಎಸ್. ವೆಂಕಟೇಶಮೂರ್ತಿ, ಸುಮತೀಂದ್ರ ನಾಡಿಗ್, ಡಾ.ಚಿದಾನಂದಮೂರ್ತಿ ಅಂಥವರನ್ನು ಕೊಡುಗೆಯಾಗಿ ನೀಡಿದೆ’ ಎಂದರು.

ADVERTISEMENT

ಎಡಿಯೂರು ಮಠದ ರೇಣುಕಾ ಶಿವಾಚಾರ್ಯ ಸ್ವಾಮೀಜಿ, ಡಾ.ಟಿ.ಎನ್. ನಾಗರಾಜ್, ನಾಗರಾಜ್‌ರಾವ್, ಶಂಕರಪ್ಪ, ಲಿಂಗೇಶ್‌ಮೂರ್ತಿ, ದೇವರಾಜ್, ಟಿ.ಎನ್. ಚಂದ್ರಶೇಖರ್, ಜಯರಾಂ, ನಿವೃತ್ತ ಪ್ರಾಂಶುಪಾಲ ಭುವನೇಶ್ವರ್‌ ಉಪಸ್ಥಿತರಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.