ಬಸವಾಪಟ್ಟಣ: ಸಮೀಪದ ಕಂಸಾಗರದಲ್ಲಿ ಮಂಗಳವಾರ ಹೆಜ್ಜೇನು ದಾಳಿಯಿಂದ ಯುವಕ ಮೃತಪಟ್ಟಿದ್ದಾನೆ.
ಕಂಸಾಗರದ ಮಡಿವಾಳರ ಪರಸಪ್ಪ ಅವರ ಪುತ್ರ ಮಲ್ಲೇಶ್ (24) ಮೃತ ಯುವಕ.
ಮಲ್ಲೇಶ್ ಗ್ರಾಮದ ಅಡಿಕೆ ತೋಟದ ತಿರುವಿನಲ್ಲಿ ಬರುತ್ತಿರುವಾಗ ಹೆಜ್ಜೇನುಗಳು ಏಕಾಏಕಿ ದಾಳಿ ಮಾಡಿವೆ. ನೂರಾರು ಜೇನುಗಳು ಒಮ್ಮೆಲೇ ದಾಳಿ ಮಾಡಿದ್ದರಿಂದ ಗಂಭೀರವಾಗಿ ಗಾಯಗೊಂಡಿದ್ದರು. ಆಸ್ಪತ್ರೆಗೆ ಕರೆದೊಯ್ಯುವ ಮಾರ್ಗ
ಮಧ್ಯೆ ಮೃತಪಟ್ಟಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದರು. ಬಸವಾಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.