ADVERTISEMENT

ವೃತ್ತಿ ರಂಗಭೂಮಿ ಕೇಂದ್ರಕ್ಕೆ ವಿಶೇಷಾಧಿಕಾರಿ ನೇಮಕ

​ಪ್ರಜಾವಾಣಿ ವಾರ್ತೆ
Published 21 ಜುಲೈ 2019, 6:53 IST
Last Updated 21 ಜುಲೈ 2019, 6:53 IST
ಗಂಗಾಧರಸ್ವಾಮಿ
ಗಂಗಾಧರಸ್ವಾಮಿ   

ದಾವಣಗೆರೆ: ಕೊಂಡಜ್ಜಿ ಬೆಟ್ಟದ ಪರಿಸರದಲ್ಲಿ ನಿರ್ಮಾಣಗೊಳ್ಳಲಿರುವ ‘ವೃತ್ತಿ ರಂಗಭೂಮಿ ಕೇಂದ್ರ’ಕ್ಕೆ ವಿಶೇಷಾಧಿಕಾರಿಯನ್ನಾಗಿ ಮೈಸೂರಿನ ಹಿರಿಯ ರಂಗ ನಿರ್ದೇಶಕ ಪಿ. ಗಂಗಾಧರಸ್ವಾಮಿ ಅವರನ್ನು ಸರ್ಕಾರ ನೇಮಕ ಮಾಡಿ ಆದೇಶ ಹೊರಡಿಸಿದೆ.

ಮೈಸೂರು, ಧಾರವಾಡ ರಂಗಾಯಣಗಳ ಹುಟ್ಟು ಬೆಳವಣಿಗೆಯಲ್ಲಿ ಅಪಾರ ಶ್ರಮ ಮತ್ತು ಸೇವೆ ಸಲ್ಲಿಸಿದ ಗಂಗಾಧರಸ್ವಾಮಿ ಬಹುಶೃತ ರಂಗಕರ್ಮಿ. ಅನೇಕ ನಾಟಕ ಕಂಪನಿಗಳಿಗೆ ವೃತ್ತಿ ನಾಟಕಗಳ ನಿರ್ದೇಶನ ಮಾಡಿರುವ ಅವರು ಪ್ರಯೋಗಶೀಲತೆಯ ಆಧುನಿಕ ರಂಗಭೂಮಿ, ಜನಪದ ರಂಗಭೂಮಿಯ ದೊಡ್ಡಾಟದಲ್ಲೂ ಪರಿಣತಿ ಹೊಂದಿದವರು. ಸಮುದಾಯ ರಂಗ ಸಂಘಟನೆಯ ಸ್ಥಾಪಕರಲ್ಲೊಬ್ಬರಾದ ಗಂಗಾಧರಸ್ವಾಮಿ ನಟ, ನಿರ್ದೇಶಕ, ನೇಪಥ್ಯ ರಂಗ ಶಿಕ್ಷಕರಾಗಿ ಮೈಸೂರು ರಂಗಾಯಣದಲ್ಲಿ ಬಿ.ವಿ. ಕಾರಂತರೊಂದಿಗೆ ಕೆಲಸ ಮಾಡಿದವರು.

ಕೊಂಡಜ್ಜಿಯಲ್ಲಿ ಈ ಹಿಂದೆ ಸಮುದಾಯದ ಅನೇಕ ಶಿಬಿರಗಳನ್ನು ನಡೆಸಿ ಕೊಟ್ಟಿರುವ ಅವರು ‘ರಂಗ ಶಿಬಿರಗಳ ಚಕ್ರವರ್ತಿ’ ಎಂದು ಹೆಸರು ಪಡೆದಿದ್ದರು ಎಂದು ಕರ್ನಾಟಕ ರಂಗ ಸಮಾಜ ಸದಸ್ಯ ಮಲ್ಲಿಕಾರ್ಜುನ ಕಡಕೋಳ ತಿಳಿಸಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.